ಪೊಲೀಸರಿಗೆ ಸರೆಂಡರ್‌ ಆಗುವಂತೆ ಅಮೃತ್‌ಪಾಲ್‌ಗೆ ಹೇಳಿದ ಸಿಖ್‌ ಸಂಘಟನೆ ಅಕಾಲ್‌ ತಖ್ತ್‌!

masthmagaa.com:

ಪೊಲೀಸರ ಕಣ್ತಪ್ಪಿಸಿ ಓಡಾಡ್ತಿರೋ ಖಲಿಸ್ತಾನಿ ತೀವ್ರವಾದಿ ಅಮೃತ್‌ಪಾಲ್‌, ಪೊಲೀಸರಿಗೆ ಸರೆಂಡರ್‌ ಆಗಿ ತನಿಖೆಗೆ ಸಹಕರಿಸಬೇಕು ಅಂತ ಸಿಖ್‌ರ ಪ್ರಮುಖ ಸಂಘಟನೆ ಅಕಾಲ್‌ ತಖ್ತ್‌ ಹೇಳಿದೆ. ಇದೇ ವೇಳೆ ಇಷ್ಟು ದೊಡ್ಡ ಪೊಲೀಸ್‌ ಪಡೆ ಹೊಂದಿದ್ರೂ ಅಮೃತ್‌ಪಾಲ್‌ನ್ನ ಹಿಡಿಯೋಕೆ ಏಕೆ ಸಾಧ್ಯವಾಗಿಲ್ಲ. ಅಮೃತ್‌ ಪಾಲ್‌ ಏನಾದ್ರೂ ಪೊಲೀಸರಿಂದ ತಪ್ಪಿಸಿಕೊಂಡು ಹೊರಗಡೆ ಇದ್ರೆ ನಾನು ಅವನಿಗೆ ಸರೆಂಡರ್‌ ಆಗಿ ತನಿಖೆಗೆ ಸಹಕರಿಸುವಂತೆ ಹೇಳುತ್ತೇನೆ ಅಂತ ಅಕಾಲ್‌ ತಖ್ತ್‌ನ ಜತೇದಾರ್‌ ಗಿಯಾನಿ ಹರ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ. ಇತ್ತ ಅಜ್ನಾಲ್‌ ಪೊಲೀಸ್‌ ಸ್ಟೇಶನ್‌ ಮೇಲಿನ ದಾಳಿ ಕೇಸ್‌ಗೆ ಸಂಬಂಧಿಸಿದಂತೆ ʻವಾರಿಸ್‌ ಪಂಜಾಬ್‌ ದೇʼನ 10 ಸದಸ್ಯರಿಗೆ ಏಪ್ರಿಲ್‌ 6ರ ವರೆಗೆ ಅಲ್ಲಿನ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

-masthmagaa.com

Contact Us for Advertisement

Leave a Reply