masthmagaa.com:
ಮಣಿಪುರದಲ್ಲಿ ನಡೆಯುತ್ತಿರೋ ಹಿಂಸಾಚಾರ ನಿಲ್ಲುವ ಯಾವ ಲಕ್ಷಣನೂ ಕಾಣ್ತಿಲ್ಲ. ಸೆಕ್ಷನ್ 144ರ ಅಡಿ ಹೇರಲಾಗಿದ್ದ ನಿರ್ಬಂಧವನ್ನ ಸಡಿಲಗೊಳಿಸಲಾಗಿದೆ ಅಂತ ಅನೌನ್ಸ್ ಮಾಡಿದ ಬೆನ್ನಲ್ಲೇ ಮತ್ತೆ ಹಿಂಸಚಾರ ಭುಗಿಲೆದ್ದಿದೆ. ಬಿಷ್ಣುಪುರದಲ್ಲಿ ಬಂಡುಕೋರ ಜೊತೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಗ್ರಾಮದ ಸ್ವಯಂ ಸೇವಕರು ಮೃತಪಟ್ಟಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ. ಭಾರಿ ಗುಂಡಿನ ಚಕಮಕಿ ನಡೆಯುತ್ತಿದ್ದು, ಪ್ರಾಣಹಾನಿ ಹೆಚ್ಚಾಗೋ ಸಾಧ್ಯತೆಯಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಪಶ್ಚಿಮ ಮಣಿಪುರ ಭಾಗದ ಎಲ್ಲ ಪ್ರದೇಶಗಳಲ್ಲೂ ಇಂದು ಬೆಳಗ್ಗೆ 5 ಗಂಟೆಯಿಂದ ಸಂಜೆ 6ರವರೆಗೆ ಸಾಮಾನ್ಯ ನಾಗರಿಕರು ತಮ್ಮ ಮನೆಗಳಿಂದ ಹೊರಬರೋಕೆ ಹೇರಲಾಗಿದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ ಅಂತ ತಿಳಿಸಲಾಗಿತ್ತು. ಅಂದ್ಹಾಗೆ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ 100ಕ್ಕೂ ಜನ ಮೃತಪಟ್ಟಿದ್ದಾರೆ.
-masthmagaa.com
Contact Us for Advertisement