masthmagaa.com:
ಭಾರತ ಮಂಡಿಸಿದ ನಿರ್ಣಯ ಒಂದಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮನ್ನಣೆ ಸಿಕ್ಕಿದೆ. ಶಾಂತಿ ಸ್ಥಾಪನೆ, ಹೋರಾಟ, ಜನರ ರಕ್ಷಣೆ ಸೇರಿ ಹಲವು ರೀತಿಯಲ್ಲಿ ಕಾರ್ಯ ನಿರ್ವಹಿಸುವಾಗ ಹುತಾತ್ಮರಾದ ವಿಶ್ವಸಂಸ್ಥೆ ಶಾಂತಿ ಸ್ಥಾಪಕರಿಗೆ ಗೌರವ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಸ್ಮಾರಕ ಒಂದನ್ನ ನಿರ್ಮಿಸಬೇಕು ಅನ್ನೊ ನಿರ್ಣಯವನ್ನ ಯುಎನ್ನಲ್ಲಿರೋ ಭಾರತದ ಖಾಯಂ ರಾಯಭಾರಿ ರುಚಿರಾ ಕಾಂಬೋಜ್ ಮಂಡಿಸಿದ್ರು. ಭಾರತದ ಈ ನಿರ್ಣಯಕ್ಕೆ ವಿಶ್ವಸಂಸ್ಥೆಯ 190 ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿದ ಹಿನ್ನೆಲೆ, ಒಮ್ಮತದ ಮೇರೆಗೆ ನಿರ್ಣಯವನ್ನ ಅಳವಡಿಸಿಕೊಳ್ಳಲಾಗಿದೆ.
-masthmagaa.com
Contact Us for Advertisement