masthmagaa.com:
ಉತ್ತರಾಖಂಡ್ನಲ್ಲಿ ಆಡಳಿತರೂಢ ಬಿಜೆಪಿ ಏಕರೂಪ ನಾಗರಿಕ ಸಂಹಿತೆ ಅಥ್ವಾ UCC ಕಾನೂನಿನ ಕರಡು ಸಮಿತಿ ಅವಧಿಯನ್ನ 15 ದಿನ ವಿಸ್ತರಣೆ ಮಾಡಿದೆ. ಈ ಸಮಿತಿ ಈಗಾಗ್ಲೆ UCC ಡ್ರಾಫ್ಟ್ ಪೂರ್ಣಗೊಳಿಸಿದೆ ಅಂತ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಸಮಿತಿ ಉತ್ತರಾಖಂಡ ಸರ್ಕಾರಕ್ಕೆ ಫೆಬ್ರುವರಿ 2ರಂದು ವರದಿ ಸಲ್ಲಿಸೋ ನಿರೀಕ್ಷೆಯಿದೆ ಎನ್ನಲಾಗಿದೆ. ಅಂದ್ಹಾಗೆ ಈ ಬಿಲ್ನ್ನ ವಿಧಾನಸಭೆಯಲ್ಲಿ ಪಾಸ್ ಮಾಡಲು ಧಾಮಿ ತಮ್ಮ ಕ್ಯಾಬಿನೇಟ್ನೊಂದಿಗಿನ ಅಯೋಧ್ಯೆ ಪ್ರವಾಸವನ್ನ ಕ್ಯಾನ್ಸಲ್ ಮಾಡಿದ್ದಾರೆ. ಈ ಮೂಲಕ ಸದ್ಯದಲ್ಲೇ ವಿಶೇಷ ಅಧಿವೇಶನ ಕರೆದು UCC ಜಾರಿಗೊಳಿಸಲಿದ್ದಾರೆ ಅಂತ ತಿಳಿದು ಬಂದಿದೆ.
-masthmagaa.com
Contact Us for Advertisement