ರಾಮ ಮಂದಿರ ಗುದ್ದಲಿ ಪೂಜೆಗೆ ಪ್ರತಾಪ್‌ಸಿಂಹ್‌ಗೆ ಘೇರಾವ್ ಹಾಕಿದ ದಲಿತರು!

masthmagaa.com:

ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಸಲಾಗಿದೆ. ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ್‌ಗೆ ದಲಿತ ಮುಖಂಡರು ಘೇರಾವ್‌ ಹಾಕಿ, ದಲಿತ ವಿರೋಧಿ ಅಂತ ಕರೆದು ವಾಪಾಸ್‌ ಕಳಿಸಿದ್ದಾರೆ. ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ ದಲಿತರೊಬ್ಬರಿಗೆ ಸೇರಿದ ಜಮೀನಿನನಲ್ಲಿ ರಾಮ ಪೂಜೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದಲಿತ ವಿರೋಧಿ ಹೇಳಿಕೆ ನೀಡುವ ನೀವೆಕೆ ಇಲ್ಲಿಗೆ ಬಂದಿದ್ದೀರಾ.. ಈ ಹಿಂದೆ ಮಹಿಷ ದಸರಾಗೆ ವಿರೋಧದ ನೆಪ ಹೇಳಿಕೊಂಡು ದಲಿತರಿಗೆ ಅಪಮಾನ ಮಾಡಿದ್ದೀರಿ ಅಂತ ದಲಿತ ಮುಖಂಡರು ಪ್ರತಾಪ್‌ ಸಿಂಹರನ್ನ ತರಾಟೆಗೆ ತೆಗೆದು ಕೊಂಡಿದ್ದಾರೆ. ಇದ್ರಿಂದ ಬೇಸರಗೊಂಡ ಸಂಸದ ಪ್ರತಾಪ್‌ ಸಿಂಹ ಬಂದ ದಾರಿಯಲ್ಲೆ ವಾಪಸ್‌ ತೆರಳಿದ್ದಾರೆ.

-masthmagaa.com

Contact Us for Advertisement

Leave a Reply