ರಷ್ಯಾ-ಯುಕ್ರೇನ್‌ ಯುದ್ಧವನ್ನ ಭಾರತ ಖಂಡಿಸಬೇಕು: ಜರ್ಮನಿ ವೈಸ್‌ ಚಾನ್ಸಲರ್‌

masthmagaa.com:

ಜರ್ಮನಿಯ ವೈಸ್‌ ಚಾನ್ಸಲರ್‌ ರಾಬರ್ಟ್‌ ಹೆಬೆಕ್‌ ಅವ್ರು ಮೂರು ದಿನ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಈ ವೇಳೆ ಯುಕ್ರೇನ್‌ ಮೇಲಿನ ರಷ್ಯಾ ಆಕ್ರಮಣವನ್ನ ಭಾರತ ಖಂಡಿಸಬೇಕು ಅಂತ ಒತ್ತಾಯಿಸಿದ್ದಾರೆ. ಎಲ್ಲಾದ್ರೂ ಅನ್ಯಾಯ ಆಗ್ತಿದೆ ಅಂದಾಗ ನೀವು ತಟಸ್ಥರಾಗಿ ಇರೋಕೆ ಸಾಧ್ಯವಿಲ್ಲ. ಯುದ್ಧವನ್ನ ಏಕಪಕ್ಷೀಯ ಹಾಗೂ ಪುಟಿನ್‌ರ ಆಕ್ರಮಣ ಅಂತ ಭಾರತ ಹೇಳಬೇಕು. ಈ ರೀತಿ ಒಂದೇ ಒಂದು ಸಲ ಸ್ಪಷ್ಟವಾಗಿ ಹೇಳಿದ್ರೆ ನಾನು ತುಂಬಾ ಸಂತೋಷ ಪಡ್ತೀನಿ ಹಾಗೂ ಇದ್ರಿಂದ ಭಾರತ ಹಾಗೂ ಜರ್ಮನಿ ನಡುವಿನ ಸಂಬಂಧ ಬೆಳವಣಿಗೆ ಆಗಲಿದೆ ಅಂತ ರಾಬರ್ಟ್‌ ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply