ಸಚಿವ ಸಂಪುಟವನ್ನ ಪುನರ್‌ ರಚಿಸೋದಾಗಿ ಮಮತಾ ಬ್ಯಾನರ್ಜಿ ಘೋಷಣೆ!

masthmagaa.com:

ಪಶ್ಚಿಮ ಬಗಾಳದ ಸಿಎಂ ಮಮತಾ ಬ್ಯಾನರ್ಜಿ ಸಚಿವ ಸಂಪುಟವನ್ನ ಪುನರ್‌ ರಚಿಸೋದಾಗಿ ಘೋಷಿಸಿದ್ದಾರೆ. ಕ್ಯಾಬಿನೆಟ್‌ಗೆ ಹೊಸದಾಗಿ ನಾಲ್ಕರಿಂದ ಐದು ಜನ ಸೇರ್ಪಡೆ ಆಗಲಿದ್ದಾರೆ ಅಂತ ಹೇಳಲಾಗಿದೆ. ಈ ಬಗ್ಗೆ ಮಾತಾಡಿದ ಮಮತಾ ಬ್ಯಾನರ್ಜಿ, ʻಇಡೀ ಸಚಿವ ಸಂಪುಟವನ್ನ ವಿಸರ್ಜಿಸಿ ಹೊಸ ಸಚಿವ ಸಂಪುಟ ರಚನೆ ಮಾಡುವ ಪ್ಲ್ಯಾನ್‌ ಇಲ್ಲ. ನಾವು ಕೆಲವು ಸಚಿವರನ್ನ ಕಳೆದುಕೊಂಡಿದ್ದೇವೆ. ಆದ್ರೆ ಕೆಲಸ ಆಗಬೇಕು. ನನಗೊಬ್ಬಳಿಗೆ ಎಲ್ಲ ಹ್ಯಾಂಡಲ್‌ ಮಾಡೋಕೆ ಸಾಧ್ಯವಿಲ್ಲ. ಅದಕ್ಕೆ ಪುನರ್‌ರಚನೆ ಮಾಡಲಾಗ್ತಿದೆʼ ಅಂತ ಹೇಳಿದ್ದಾರೆ. ಜೊತೆಗೆ ರಾಜ್ಯದಲ್ಲಿ ಹೊಸದಾಗಿ 7 ಜಿಲ್ಲೆಗಳನ್ನ ಮಾಡೋದಕ್ಕೆ ಸಿದ್ದವಾಗಿದ್ದೇವೆ. ಇದಕ್ಕೆ ಕ್ಯಾಬಿನೆಟ್‌ ಕೂಡ ಒಪ್ಪಿದೆ ಅಂತ ದೀದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply