masthmagaa.com:
ಭಾರತ, ರಷ್ಯಾದ ಶಸ್ತ್ರಾಸ್ತ್ರಗಳನ್ನ ಬಳಸುತ್ತಿರೋದನ್ನ ಸಮರ್ಥಿಸಿಕೊಂಡು ಪಾಶ್ಚಿಮಾತ್ಯ ದೇಶಗಳ ವಿರುದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕ್ರೋಶ ಹೊರಹಾಕಿದ್ದಾರೆ. ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿರೊ ಜೈಶಂಕರ್, ಪಾಶ್ಚಿಮಾತ್ಯ ದೇಶಗಳು ವರ್ಷಗಳಿಂದ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನ ಪೂರೈಸುತ್ತಾ ಬಂದಿವೆ ಆದರೆ ಭಾರತಕ್ಕೆ ನೀಡಿಲ್ಲ. ಈ ವೇಳೆ ನಮ್ಮ ಜೊತೆಗಿದ್ದದ್ದು ರಷ್ಯಾ. ಅದ್ರಿಂದಾನೆ ಶಸ್ತ್ರಾಸ್ತ್ರ ಖರೀದಿ ಮಾಡದಂತೆ ಹೇಳುತ್ವೆ ಅಂತ ಕಿಡಿಕಾರಿದ್ದಾರೆ. ಜೊತೆಗೆ ರಷ್ಯಾ ಜೊತೆಗೆ ನಾವು ದೀರ್ಘ ಕಾಲದ ಸಂಬಂಧ ಹೊಂದಿದ್ದೇವೆ. ಈ ಸಂಬಂಧ ಭಾರತದ ಹಿತಾಸಕ್ತಿಗಳ ಪರವಾಗಿದೆ. ನಮ್ಮ ಹತ್ರ ಸೋವಿಯತ್ ಮತ್ತು ರಷ್ಯಾ ನಿರ್ಮಿತ ಅನೇಕ ಶಸ್ತ್ರಾಸ್ತ್ರಗಳಿವೆ ಅಂತ ಹೇಳಿದ್ದಾರೆ ಎನ್ನಲಾಗಿದೆ.. ಅಂದ್ಹಾಗೆ ಜೈಶಂಕರ್ ಅವರನ್ನು ಆಸ್ಟ್ರೇಲಿಯಾ ತನ್ನ ಹಳೆಯ ಪಾರ್ಲಿಮೆಂಟ್ ಕಟ್ಟಡದ ಮೇಲೆ ಭಾರತದ ದ್ವಜವನ್ನು ಬೆಳಗಿಸುವ ಮೂಲಕ ಸ್ವಾಗತಿಸಿದೆ. ಇದಕ್ಕೆ ʼತಿರಂಗಾ ವೆಲ್ಕಮ್ʼ ಅಂತ ಕರೆದಿದ್ದಾರೆ. ಇನ್ನು ಭಾರತದ ಜೊತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗಿಯಾಗಿದಕ್ಕೆ ಜೈಶಂಕರ್ ಆಸ್ಟ್ರೇಲಿಯಾಕ್ಕೆ ಧನ್ಯವಾದ ತಿಳಿಸಿದ್ದಾರೆ.
-masthmagaa.com
Contact Us for Advertisement