ಸಿದ್ದರಾಮಯ್ಯ ಅವರ ವಿರುದ್ದ ಕುರುಬ ಸಮಾಜದ ಮುಖಂಡರು ಮಾತಾಡಿದ್ದೇನು?

masthmagaa.com:

ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕುರುಬ ಸಮುದಾಯದ ಮುಖಂಡರು ಕೆಟ್ಟ ಪದಗಳಲ್ಲಿ ಅವಹೇಳನ ಮಾಡಿ ಸುದ್ದಿಯಾಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಕುರುಬರಿಗೆ ರಾಜಕೀಯ ಅಧಿಕಾರ ನೀಡುವಂತೆ ಆಗ್ರಹಿಸಿ ಕುರುಬ ಸಮಾಜದ ಮುಖಂಡರು ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ ಹಾಗೂ ಪುಟ್ಟಸ್ವಾಮಿ ಅವ್ರು ಮಾತಾಡಿದ ವಿಡಿಯೋ ವೈರಲ್‌ ಆಗಿದೆ. ಮುರುಗಾ ಸ್ವಾಮೀಜಿ ವಿಷಯ ಹೊರಬಂದಿದೆ. ನಮ್ಮ ಟಗರು ಏನ್ ಕಡಿಮೆನಾ? 20 ಕುರಿಗಳ ಮೇಲೆ ಎಗರಿ ಬೀಳುತ್ತೆ ಅಂತೆಲ್ಲ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದು, ಭಾರೀ ಸಂಚಲನ ಮೂಡಿಸಿದೆ. ಎಲ್ಲರದ್ದೂ ಅಷ್ಟೇ, ಕೆಲವರದ್ದು ಹೊರಗೆ ಬರುತ್ತೆ, ಕೆಲವರದ್ದು ಹೊರಗೆ ಬರಲ್ಲ. ಆಗ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯನ ಬಗ್ಗೆ ಮಾತನಾಡುವಾಗ ಹುಷಾರು ಅಂತ ಹೇಳಿದ್ದು, ಅವನು ಬುದ್ಧಿವಂತ ಮನೆ ಒಳಗೆ ಸೇರಿಕೊಂಡುಬಿಡ್ತಾನೆ ಅಂತ ಏಕವಚನ ಬಳಸಿಯೇ ಮಾತಾಡಿರೋದು ಕಂಡುಬಂದಿದೆ.

-masthmagaa.com

Contact Us for Advertisement

Leave a Reply