ಸಂತೋಷ್‌ ಆತ್ಮಹತ್ಯೆ ಹೇಗಾಯ್ತು? ಸಂತೋಷ್‌ ಸ್ನೇಹಿತರು ಹೇಳಿದ್ದು ಏನು?

masthmagaa.com:

ಕೆ.ಎಸ್‌. ಈಶ್ವರಪ್ಪ 40% ಕಮಿಷನ್‌ ಅಂದ್ರೆ ಲಂಚಕ್ಕೆ ಬೇಡಿಕೆ ಇಟ್ಟಿದ್ರು ಅಂತ ಆರೋಪಿಸಿ, ಆತ್ಮಹತ್ಯೆ ಮಾಡ್ಕೊಂಡಿದ್ದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವು ಹೇಗಾಯ್ತು ಅನ್ನೋದನ್ನ ಅವ್ರ ಸ್ನೇಹಿತರು ಪೋಲಿಸರಿಗೆ ವಿವರಿಸಿದ್ದಾರೆ. ಸಂತೋಷ್‌ ಜೊತೆಗೆ ಉಡುಪಿಗೆ ತೆರಳಿದ್ದ ಆತನ ಸ್ನೇಹಿತರಾದ ಪ್ರಶಾಂತ್‌ ಶೆಟ್ಟಿ ಮತ್ತು ಸಂತೋಷ್‌ ಮೇದಪ್ಪ ಸದ್ಯ ಪೋಲಿಸರ ಬಳಿ ಇದ್ದು, ಲಾಡ್ಜ್‌ನಲ್ಲಿ ನಡೆದ ಘಟನೆಯನ್ನ ಹಂತ ಹಂತವಾಗಿ ಎಕ್ಸ್‌ಪ್ಲೇನ್‌ ಮಾಡಿದ್ದಾರೆ. ಅವ್ರ ಪ್ರಕಾರ ಮೂರು ಜನ ಏಪ್ರಿಲ್‌ 7 ರಂದು ಧಾರವಾಡದಿಂದ ಕಾರಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ನಾಲ್ಕು ದಿನ ಬಾನ್‌ ಆಫ್‌ ಬೆರ್ರಿ ಅನ್ನೋ ಹೋಂ ಸ್ಟೇನಲ್ಲಿ ಉಳ್ಕೊಂಡಿದ್ದಾರೆ. ನಂತ್ರ ಏಪ್ರಿಲ್‌ 11 ರ ಸಂಜೆ 4 ಗಂಟೆಗೆ ಉಡುಪಿಗೆ ಬಂದು ಶಾಂಭವಿ ಲಾಡ್ಜ್‌ನಲ್ಲಿ ರೂಮ್‌ ಬುಕ್‌ ಮಾಡಿದ್ದಾರೆ. ಸಂತೋಷ್‌ ಹೆಸ್ರಲ್ಲೇ ಎರಡು ರೂಂ ಬುಕ್‌ ಆಗಿದ್ದು, ಸಂತೋಷ್‌ ರೂಮ್‌ ನಂ 207ರಲ್ಲಿ ಉಳ್ಕೊಂಡ್ರೆ, ಪ್ರಶಾಂತ್‌ ಮತ್ತು ಸಂತೋಷ್‌ ಮೇದಪ್ಪ(ಅವ್ರ ಹೆಸ್ರು ಕೂಡ ಸಂತೋಷ್‌) ರೂಂ ನಂ 209ರಲ್ಲಿಉಳ್ಕೊಂಡಿದ್ದಾರೆ. ನಂತ್ರ ಅವತ್ತೆ ಸಾಯಂಕಾಲ 7 ಗಂಟೆಗೆ ಮೂರು ಜನ ಡ್ರಿಂಕ್ಸ್‌ ಮಾಡೋಕೆ ಬಾರ್​ಗೆ ಹೋಗಿದ್ದಾರೆ. ವಾಪಸ್‌ ಬರ್ತಾ ಸಂತೋಷ್‌ ಹಣ್ಣಿನ ಜ್ಯೂಸ್‌ ತಗೊಂಡಿದ್ದಾರೆ. ಆದ್ರೆ ಉಳಿದ ಇಬ್ರು ಸ್ನೇಹಿತ್ರು ಊಟಕ್ಕೆ ಅಂತ ಹೋಟೆಲ್‌ಗೆ ಹೋಗಿದ್ದಾರೆ. ಸಂತೋಷ್‌ ಮಾತ್ರ ಲಾಡ್ಜ್‌ಗೆ ವಾಪಸ್‌ ತೆರಳಿದ್ದಾರೆ. ಆ ನಂತ್ರ ರಾತ್ರಿ 9 ಮುಕ್ಕಾಲಿಗೆ ಪ್ರಶಾಂತ್‌ ಮತ್ತು ಸಂತೋಷ್‌ ಮೇದಪ್ಪ ಮಲಗಿರೋದಾಗಿ ಹೇಳ್ಕೊಂಡಿದ್ದಾರೆ. ಇತ್ತ ಸಂತೋಷ್‌ ತನ್ನ ಗೆಳಯರಿಗೆ ಬೆಳಗ್ಗೆ ಎಬ್ಬಿಸ್ಬೇಡಿ ಅಂತ ಹೇಳಿ ಹೋಗಿದ್ದಾರೆ. ಇದೆಲ್ಲ ಆದ್ಮೇಲೆ ಬೆಳಗ್ಗೆ ಸಂತೋಷ್‌ ಬೇಗ ಎದ್ದಿಲ್ಲ. ಹಾಗಾಗಿ ಇಬ್ರು ಹೋಟೆಲ್‌ಗೆ ಹೋಗಿ ತಿಂಡಿ ತಿಂದಿದ್ದಾರೆ. ಇದೆಲ್ಲದರ ನಡುವೆ ಬೆಳಗ್ಗೆ 9:30-10 ಗಂಟೆ ಸುಮಾರಿಗೆ ಬೆಳಗಾವಿಯಿಂದ ಗೆಳೆಯ ಸುನಿಲ್‌ ಪವಾರ್‌ ಪ್ರಶಾಂತ್‌ಗೆ ಕರೆ ಮಾಡಿ ಸಂತೋಷ್‌ ಪಾಟೀಲ್‌ ಕಾಣೆಯಾದ ಬಗ್ಗೆ ಮಾಧ್ಯಮಗಳಲ್ಲಿ ಬರ್ತಾ ಇದೆ ಅಂತ ತಿಳಿಸಿದ್ದಾರೆ. ತಕ್ಷಣವೇ ಸ್ನೇಹಿತರು ಸಂತೋಷ್​​ ರೂಮ್​ ಬಳಿ ಹೋಗಿ ಬಾಗಿಲು ಬಡಿದು, ಫೋನ್‌ ಮಾಡಿದ್ದಾರೆ. ಆದ್ರೂ ಸಂತೋಷ್‌ ರೆಸ್ಪಾನ್ಸ್‌ ಮಾಡಿಲ್ಲ. ನಂತ್ರ ರಿಸೆಪ್ಷನಿಸ್ಟ್‌ಗೆ ಅವ್ರು ಎಲ್ಲಾದ್ರು ಹೊರಗೆ ಹೋಗಿದ್ರಾ ಅಂತ ಕೇಳಿದ್ಕೆ, ಅವ್ರು ಇಲ್ಲ ಅಂತ ಹೇಳಿದ್ದಾರೆ. ಆಗ ಗಾಬರಿಗೊಂಡ ಇಬ್ರು ಮತ್ತೆ 15 ನಿಮಿಷ ಕಾಲ್‌ ಮಾಡಿ, ಬಾಗಿಲು ತಟ್ಟಿ ಎದ್ದೇಳಿಸೋಕೆ ಪ್ರಯತ್ನ ಪಟ್ವಿದ್ದಾರೆ. ಆದ್ರೂ ಸಂತೋಷ್‌ ಬಾಗಿಲು ತೆಗಿದಿಲ್ಲ. ಕೊನೆಗೆ ರಿಸೆಪ್ಷನಿಸ್ಟ್‌ಗೆ ಹೇಳಿ ಡೂಪ್ಲಿಕೇಟ್‌ ಕೀ ಬಳಸಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಗಿಲು ತೆಗೆದು ನೋಡಿದ್ರೆ, ಸಂತೋಷ್‌ ಮೃತದೇಹ ಇತ್ತು ಅಂತ ಇಬ್ಬರು ಸ್ನೇಹಿತರು ಪೋಲಿಸ್‌ ಮುಂದೆ ಹೇಳಿಕೆ ನೀಡಿದ್ದಾರೆ ಅಂತ ವರದಿಯಾಗಿದೆ. ಇಲ್ಲಿ ಅವ್ರ್ಯಾಕೆ ಎರಡು ಪ್ರತ್ಯೇಕ ರೂಂ ಮಾಡಿದ್ರು, ಈ ಮಧ್ಯ ರಾತ್ರಿ ಏನಾದ್ರು ನಡೆದಿತ್ತಾ ಅನ್ನೋ ಅಂಶಗಳು ತನಿಖೆಯಿಂದ ಬೆಳಕಿಗೆ ಬರ್ಬೇಕು.

-masthmagaa.com

Contact Us for Advertisement

Leave a Reply