masthmagaa.com:
ಗ್ಯಾಂಬಿಯಾದಲ್ಲಿ ಭಾರತದ ಮೂಲದ ಸಿರಪ್ನಿಂದ ಮಕ್ಕಳ ಸಾವಾಗಿದೆ ಅಂತ WHO ಮಾತನಾಡ್ತಿರೋದು ತಪ್ಪು ಅಂತ ಆರೋಪ ಹೊತ್ತಿರೋ ಸಿರಪ್ ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಗಾಂಬಿಯಾದಲ್ಲಿ ಸಂಭವಿಸಿದ ಕೆಲವು ಮಕ್ಕಳ ಸಾವಿಗೆ ಭಾರತದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ ಕೆಲವೊಂದು ಶಂಕಿತ ಸಿರಪ್ಗಳು ಕಾರಣ ಅಂತ ಆರೋಪಿಸಿ, ಅದ್ರ ಸ್ಯಾಂಪಲ್ಅನ್ನ ವಿಶ್ವ ಆರೋಗ್ಯ ಸಂಸ್ಥೆ ಟೆಸ್ಟ್ಗೆ ಕಳುಹಿಸಿತ್ತು. ಅದ್ರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಹೀಗಾಗಿ ಮತ್ತೆ ತನ್ನ ಕೆಲಸವನ್ನ ಪ್ರಾರಂಭಿಸಲು ಅನುಮತಿ ಪಡೆಯುವುದಾಗಿ ಸಂಸ್ಥೆಯ ನಿರ್ದೇಶಕ ರೇಶ್ ಕುಮಾರ್ ಗೋಯಲ್ ಹೇಳಿದ್ದಾರೆ. ಜೊತೆಗೆ ನ್ಯಾಯಂಗದ ಮೇಲೆ ಸಂಪೂರ್ಣ ನಂಬಿಕೆ ಇದ್ದು, ನಾವು ಯಾವ ತಪ್ಪು ಮಾಡಿಲ್ಲ..WHO ಈ ರೀತಿ ಸಾವಿಗೆ ಸಿರಪ್ ಕಂಪನಿಗಳಿಗೆ ಲಿಂಕ್ ಇರೋ ರೀತಿ ಮಾತನಾಡ್ತಿರೋದು ತಪ್ಪು ಅಂತ ಹೇಳಿದ್ದಾರೆ.
-masthmagaa.com
Contact Us for Advertisement