ಗ್ಯಾರಂಟಿಗಳಿಗೆ ಷರತ್ತು ವಿಧಿಸಿದ್ರೆ ಹೋರಾಟ ಮಾಡ್ತೀವಿ: ಪ್ರತಾಪ್‌ ಸಿಂಹ

masthmagaa.com:

ಕಾಂಗ್ರೆಸ್‌ ಗ್ಯಾರಂಟಿಗಳನ್ನ ಯಾವಾಗ ಜಾರಿ ಮಾಡುತ್ತೋ ಅಂತ ರಾಜ್ಯದ ಜನರು ಕಾಯ್ತಿದಾರೆ. ಈ ಮಧ್ಯೆ ಗ್ಯಾರಂಟಿಗಳನ್ನ ಯಾವುದೇ ಕಂಡೀಶನ್‌ ಇಲ್ದೇ ಜಾರಿಗೊಳಿಸಬೇಕು ಅಂತ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಜೊತೆಗೆ ಒಂದ್‌ ವೇಳೆ ಷರತ್ತು ವಿಧಿಸಿದ್ರೆ, ಜೂನ್‌ 1 ರಿಂದ ಹೋರಾಟ ಮಾಡ್ತೀವಿ ಅಂತ ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದ್‌ ಕಡೆ ಮಹಿಳೆಯರಿಗೆ ಉಚಿತ ಪ್ರಯಾಣ ಅನ್ನೊ ಕಾಂಗ್ರೆಸ್‌ನ ಗ್ಯಾರಂಟಿಯಿಂದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಟಿಕೆಟ್‌ಗೆ ಹಣ ನೀಡಲು ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆ ಬಸ್‌ ಕಂಡಕ್ಟರ್‌ಗಳ ಜೊತೆ ಗಲಾಟೆಗಳನ್ನ ಮಾಡ್ತಿದಾರೆ. ಹೀಗಾಗಿ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಸಿಬ್ಬಂದಿಗೆ ತೀವ್ರ ತೊಂದರೆಯಾಗ್ತಿದೆ. ಶೀಘ್ರ ಪರಿಹಾರವನ್ನ ಕಂಡುಕೊಡಿ ಅಂತ ಸಿಎಂ ಸಿದ್ದರಾಮಯ್ಯ ಅವ್ರಿಗೆ ಸಾರಿಗೆ ಯೂನಿಯನ್‌ ವತಿಯಿಂದ ಪತ್ರ ಬರೆಯಲಾಗಿದೆ.

-masthmagaa.com

Contact Us for Advertisement

Leave a Reply