masthmagaa.com:
ಬಿಜೆಪಿ ಮಿತ್ರ, ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮುಸ್ಲಿಂ ಮೀಸಲಾತಿ ಕುರಿತು ಇಂಟ್ರಸ್ಟಿಂಗ್ ಹೇಳಿಕೆ ಕೊಟ್ಟಿದಾರೆ. ʻರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ TDP ಸದಾ ಹೋರಾಟ ಮಾಡಿದೆ. ಮುಸ್ಲಿಂರಿಗಾಗಿ ನೀಡಿರೋ 4% ಮೀಸಲಾತಿಯನ್ನ ನಾವು ಸಂರಕ್ಷಿಸ್ತೇವೆ. ಮಸೀದಿ ಮೆಟೇನೆನ್ಸ್ಗಾಗಿ ಮುಸ್ಲಿಂರಿಗೆ ಪ್ರತೀ ತಿಂಗಳು 5,000 ರೂಪಾಯಿ ನೀಡ್ತೇವೆʼ ಅಂತೇಳಿದ್ದಾರೆ. ಬಿಜೆಪಿ ರಾಷ್ಟ್ರದ್ಯಂತ ಮುಸ್ಲಿಂ ಮೀಸಲಾತಿ ವಿಚಾರವಾಗಿ ಅಭಿಯಾನ ನಡೆಸ್ತಿರೋ ಈ ಹೊತ್ತಲ್ಲೇ ಟಿಡಿಪಿಯಿಂದ ಈ ಹೇಳಿಕೆ ಬಂದಿರೋದು ತೀವ್ರ ಸಂಚಲನಕ್ಕೆಕಾರಣವಾಗಿದೆ.
-masthmagaa.com
Contact Us for Advertisement