masthmagaa.com:
ಅತ್ಯಾಚಾರಿಗಳನ್ನ ಗೌರವಿಸೋರಿಂದ ಮಹಿಳೆಯರ ಸುರಕ್ಷತೆಯನ್ನ ನಿರೀಕ್ಷಿಸಲು ಸಾಧ್ಯ ಇಲ್ಲ ಅಂತ ರಾಹುಲ್ ಗಾಂಧಿ ಕೇಂದ್ರ ಬಿಜೆಪಿ ವಿರುದ್ಧ ಟೀಕಾಪ್ರಹಾರವನ್ನ ಮಾಡಿದ್ದಾರೆ. ಇನ್ನು ಲಖಿಂಪುರ್ನಲ್ಲಿ ಹಾಡ ಹಗಲೆ ಇಬ್ಬರು ಅಪ್ರಾಪ್ತೆ ದಲಿತ ಸಹೋದರಿಯನ್ನ ಅಪಹರಿಸಿ ಹತ್ಯೆ ಮಾಡಿರೋದು ಅತ್ಯಂತ ಆಘಾತಕಾರಿ ವಿಷಯ. ಅಂತ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಹಾಗೆ ದೇಶದಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನ ನಿರ್ಮಾಣ ಮಾಡ್ಬೇಕಾಗಿದೆ ಅಂತಲೂ ಹೇಳಿದ್ದಾರೆ. ಇನ್ನು ಈ ಹಿಂದೆ 2002ರಲ್ಲಿ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಗೋಧ್ರಾ ಜೈಲಿನಿಂದ 11 ಅಪರಾಧಿಗಳನ್ನ ಗುಜರಾತ್ ಸರ್ಕಾರ ಸನ್ನಡತೆಯ ಆಧಾರದ ಮೇಲೆ ಕ್ಷಮಾಧಾನದ ಮೇಲೆ ಬಿಡುಗಡೆ ಮಾಡಲಾಗಿತ್ತು.
-masthmagaa.com
Contact Us for Advertisement