ಅಗತ್ಯ ಬಿದ್ರೆ ಯೋಗಿ ಮಾದರಿ ಸರ್ಕಾರ ರಾಜ್ಯದಲ್ಲೂ ತರ್ತೇವೆ: ಸಿಎಂ ಬೊಮ್ಮಾಯಿ

masthmagaa.com:

ಅಗತ್ಯಬಿದ್ದರೆ ಉತ್ತರ ಪ್ರದೇಶದ ಯೋಗಿ ಮಾದರಿ ಸರ್ಕಾರವನ್ನ ರಾಜ್ಯದಲ್ಲೂ ಜಾರಿ ಮಾಡ್ತೀವಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ರಾಜ್ಯದ ಸ್ಥಿತಿಗೆ ತಕ್ಕಂತೆ ಅಲ್ಲಿನ ಸಿಎಂ ಯೋಗಿ ಸರಿ ಇದ್ದಾರೆ. ಅಂಥಾ ಪ್ರಸಂಗ ರಾಜ್ಯದಲ್ಲೂ ಬಂದ್ರೆ ಯೋಗಿ ಮಾದರಿ ಕರ್ನಾಟಕದಲ್ಲೂ ಬರುತ್ತೆ. ನಮ್ಮ ಮುಂದೆ ಕೆಲ ಸವಾಲುಗಳು ಇವೆ. ಅದರಲ್ಲೂ ಮುಖ್ಯವಾಗಿ ಕೋಮು ಗಲಭೆ ಹತ್ತಿಕ್ಕುವ ಸವಾಲು ಇದೆ. ಕಳೆದ 10 ವರ್ಷಗಳಿಂದ ಇವು ತಲೆ ಎತ್ತಿವೆ. ಕೋಮು ಸೌರ್ಹಾದತೆಗೋಸ್ಕರ ಅಗತ್ಯ ಬಿದ್ರೆ ರಾಜ್ಯದಲ್ಲೂ ನಾವು ಯೋಗಿ ಮಾದರಿ ಸರ್ಕಾರವನ್ನೇ ತರ್ತೀವಿ ಅಂತ ಹೇಳಿದ್ರು. ಇನ್ನು ಸರ್ಕಾರದ ಸಾಧನೆ ಬಗ್ಗೆ ಮಾತನಾಡಿದ ಬೊಮ್ಮಾಯಿ ʻನಮ್ಮದು ಟೀಂ ವರ್ಕ್, ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರರಿದ್ದಾರೆ. ಬದ್ಧತೆ ಇರುವ ಸಂಪುಟ ನಮ್ಮದು. ಇಂದಿನ ಈ ಸಾಧನೆಗೆ ಅವರೆಲ್ಲಾ ಪಾಲುದಾರರು ಅಂತ ಹೇಳಿದ್ರು.ಇನ್ನು ಬೊಮ್ಮಾಯಿ ಸರ್ಕಾರಕ್ಕೆಒಂದು ವರ್ಷ ಪೂರೈಕೆ ಆದ ಹಿನ್ನೆಲೆ ಕೆಲ ಹೊಸ ಘೋಷಣೆಗಳನ್ನೂ ಕೂಡ ಮಾಡಿದ್ರು.

-masthmagaa.com

Contact Us for Advertisement

Leave a Reply