masthmagaa.com
ಇತ್ತೀಚೆಗಷ್ಟೇ ಯುಕ್ರೇನ್ ನಗರ ಖಾರ್ಖೀವ್ನಿಂದ ರಷ್ಯಾ ತನ್ನ ಸೇನೆಯನ್ನ ಹಿಂತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಯುಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಖಾರ್ಖೀವ್ಗೆ ಭೇಟಿ ನೀಡಿದ್ದು ಪರಿಸ್ಥಿತಿ ಅವಲೋಕಿಸಿದ್ದಾರೆ. ಇದೇ ವೇಳೆ ರಷ್ಯಾ ಆಕ್ರಮಣಕ್ಕೆ ಬಹುಬೇಗನೇ ತುತ್ತಾಗುವ ಮೂಲಕ ನಗರದ ಭದ್ರತಾ ವೈಫಲ್ಯಕ್ಕೆ ಕಾರಣವಾದ ಅಲ್ಲಿನ ಸೆಕ್ಯೂರಿಟಿ ಚೀಫ್ನ್ನೇ ಕೆಲಸದಿಂದ ವಜಾಗೊಳಿಸಿದ್ದಾರೆ. ಇನ್ನು ಅಧಿಕಾರಿಯ ಹೆಸರನ್ನ ಮಾತ್ರ ಬಹಿರಂಗಪಡಿಸಿಲ್ಲ. ಆದ್ರೆ ಅಲ್ಲಿನ ಮಾಧ್ಯಮಗಳು ಮಾತ್ರ ಅಧಿಕಾರಿಯನ್ನ ರೋಮನ್ ದುದ್ದೀನ್ ಅಂತ ಗುರ್ತಿಸಿದ್ದಾರೆ. ಇನ್ನು ಈತ ಜನರ ರಕ್ಷಣೆ ಬಗ್ಗೆ ಆಸಕ್ತಿ ತೋರ್ತಿರ್ಲಿಲ್ಲ. ಕೇವಲ ತನ್ನ ಬಗ್ಗೆ ಮಾತ್ರ ಯೋಚನೆ ಮಾಡ್ತಿದ್ದ ಅಂತ ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ರು. ಈ ಬೆನ್ನಲ್ಲೇ ಝೆಲೆನ್ಸ್ಕಿ ಈ ಕ್ರಮ ಕೈಗೊಂಡಿದ್ದಾರೆ.
-masthmagaa.com
Contact Us for Advertisement