masthmagaa.com:
ಮಹರಾಷ್ಟ್ರದ ಅಹ್ಮದ್ನಗರದ ಸಿವಿಲ್ ಆಸ್ಪತ್ರೆಯಲ್ಲಿ ಅನಾಹುತ ಸಂಭವಿಸಿದೆ. ಇದ್ರಲ್ಲಿ 10 ಮಂದಿ ಪ್ರಾಣ ಕಳ್ಕೊಂಡು ಓರ್ವ ರೋಗಿ ಗಾಯಗೊಂಡಿದ್ದಾರೆ. ಕೊರೋನಾ ರೋಗಿಗಳಿದ್ದ ವಾರ್ಡ್ನಲ್ಲೇ ಈ ಅಗ್ನಿ ಅವಘಡ ಸಂಭವಿಸಿದ್ದು, ಮೃತರೆಲ್ಲರೂ ಕೊರೋನಾ ರೋಗಿಗಳೇ ಆಗಿದ್ದಾರೆ. ಇಲ್ಲಿ ಸುಮಾರು 17 ರೋಗಿಗಳು ಅಡ್ಮಿಟ್ ಆಗಿದ್ರು. ಅಗ್ನಿ ಅನಾಹುತ ಬಳಿಕ ಉಳಿದ 7 ಮಂದಿ ರೋಗಿಗಳನ್ನು ಬೇರೆ ಆಸ್ಪತ್ರೆಯ ಕೊರೋನಾ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಘಟನೆಗೆ ಕಾರಣ ಏನು ಅನ್ನೋದು ಸ್ಪಷ್ಟವಾಗಿ ತಿಳುದು ಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಈ ಅಗ್ನಿ ಅವಘಡ ಸಂಭವಿಸಿರಬಹುದು ಅಂತ ಅಂದಾಜಿಸಲಾಗಿದೆ. ಈ ಸಂಬಂಧ ತನಿಖೆಗೆ ಆದೇಶಿಸಿರುವ ಸಿಎಂ ಉದ್ಧವ್ ಠಾಕ್ರೆ, ಮೃತರ ಕುಟುಂಬಗಳಿಗೆ ತಲಾ ಐದೈದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
-masthmagaa.com
Contact Us for Advertisement