masthmagaa.com:
ಮಣಿಪುರದಲ್ಲಿ ಉದ್ವಿಗ್ನತೆ ಕಡಿಮೆಯಾಗೋ ಲಕ್ಷಣ ಕಾಣ್ತಿಲ್ಲ. ಇದೀಗ ಅಲ್ಲಿನ ಕೇಂದ್ರ ಸಚಿವರ ಮನೆಗೆ ಸಾವಿರಕ್ಕೂ ಅಧಿಕ ಜನ ಗುಂಪು ನಿನ್ನೆ ತಡರಾತ್ರಿ ಮುತ್ತಿಗೆ ಹಾಕಿ ಬೆಂಕಿ ಹಚ್ಚಿದೆ. ಈ ವೇಳೆ ಕೇಂದ್ರ ಸಚಿವ RK ರಂಜನ್ ಮನೆಯಲ್ಲಿ ಇರಲಿಲ್ಲ. ಇಂಫಾಲ್ದಲ್ಲಿ ಕರ್ಫೂ ಹೇರಲಾಗಿದ್ರೂ, ಅದನ್ನ ಧಿಕ್ಕಿರಿಸಿ ಸಾವಿರಾರು ಜನರು ಸಚಿವರ ಮನೆ ತಲುಪಿ ಬೆಂಕಿ ಹೆಚ್ಚಿದ್ದಾರೆ. ಈ ವಾರದ ಆರಂಭದಲ್ಲಿ ರಾಜ್ಯ ಸಚಿವ ಹಾಗೂ ಬಿಜೆಪಿ ನಾಯಕ ನೆಮ್ಚಾ ಕಿಪ್ಗೆನ್ ಅವರ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಅಂದ್ಹಾಗೆ ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಹಾಗೂ ಕುಕಿ ಸಮುದಾಯದ ನಡುವೆ ಕಳೆದ ಒಂದು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಇದುವರೆಗೆ ಘಟನೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
-masthmagaa.com
Contact Us for Advertisement