masthmagaa.com:
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ವಿರುದ್ಧ ನಡೆದ ಹಿಂಸಾಚಾರ ಸಂಬಂಧ ಮುಖ್ಯ ಆರೋಪಿ ಮತ್ತು ಆತನ ಬೆಂಬಲಿಗರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಹಿಂಸೆಗೆ ಪ್ರಚೋದನೆ ನೀಡಿರೋದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಅಂತ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಈ ಮುಖ್ಯ ಆರೋಪಿ ಶೈಕತ್ ಮಂಡಲ್ನನ್ನು ಅರೆಸ್ಟ್ ಮಾಡಲಾಗಿತ್ತು. ಈತ ತನ್ನ ಫೇಸ್ಬುಕ್ ಪೋಸ್ಟೇ ರಂಗ್ಪುರದ ಪೀರ್ಗಂಜ್ನಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಅಂತ ಒಪ್ಪಿಕೊಂಡಿದ್ದಾನೆ. ಇನ್ನು ಈತನ ಜೊತೆಗೆ ಅರೆಸ್ಟ್ ಆಗಿರೋ ರಬಿಉಲ್ ಇಸ್ಲಾಂ ಕೂಡ ಬೆಂಕಿ ಹಚ್ಚಿ, ಲೂಟಿ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ ಅಂತ ಮಾಹಿತಿ ಸಿಕ್ಕಿದೆ. ದುರ್ಗಾಪೂಜೆಯ ದಿನದಂದು ದುರ್ಗಿಯ ಕಾಲ ಬಳಿ ಕುರಾನ್ ಇಟ್ಟಿರೋ ಒಂದು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು. ಇದ್ರ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆದು, ದೇಗುಲಗಳನ್ನು, ಹಿಂದೂಗಳ ಮನೆಗಳನ್ನು ಧ್ವಂಸ ಮಾಡಲಾಗಿತ್ತು. ಹಲವರ ಹತ್ಯೆ ಕೂಡ ನಡೆದಿತ್ತು.
-masthmagaa.com
Contact Us for Advertisement