masthmagaa.com:
ಅಫ್ಘಾನಿಸ್ತಾನದಿಂದ ನಿನ್ನೆ ಕರೆತಂದಿದ್ದ 78 ಮಂದಿಯಲ್ಲಿ 16 ಮಂದಿಗೆ ಕೊರೋನಾ ಸೋಂಕು ಇರೋದು ದೃಢವಾಗಿದೆ. ಈ 78 ಮಂದಿಯನ್ನು ಕಾಬೂಲ್ನಿಂದ ತಜಕಿಸ್ತಾನದ ದುಶಾನ್ಬೆಗೆ ಕಳುಹಿಸಿ, ಅಲ್ಲಿಂದ ಭಾರತಕ್ಕೆ ಕರೆತರಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಇವರೆಲ್ಲರಿಗೂ ಟೆಸ್ಟ್ ಮಾಡಿ, ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಇದೀಗ 16 ಮಂದಿಗೆ ಕೊರೋನಾ ಇರೋದು ಗೊತ್ತಾಗಿದೆ. ಅವರೆಲ್ಲರಿಗೂ ಸೋಂಕು ಲಕ್ಷಣರಹಿತವಾಗಿದೆ. ಸೋಂಕಿತರಲ್ಲಿ ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹಿಬ್ನ್ನು ಹೊತ್ತು ತಂದಿದ್ದವರೂ ಸೇರಿದ್ದಾರೆ. ಏರ್ಪೋರ್ಟ್ನಿಂದ ಈ ಗ್ರಂಥಗಳಲ್ಲಿ ಒಂದನ್ನು ಖುದ್ದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಹೊತ್ತು ತಂದಿದ್ರು.
-masthmagaa.com
Contact Us for Advertisement