masthmagaa.com:
ಶ್ರೀಲಂಕಾದಲ್ಲಿ ಉರಿಯುತ್ತಿರೋ ಆರ್ಥಿಕ ದಳ್ಳುರಿಯ ಕಾವು ದಿನದಿನವೂ ಜಾಸ್ತಿಯಾಗ್ತಾನೇ ಇದೆ. ಸರ್ಕಾರ ಎಷ್ಟೇ ಸರ್ಕಸ್ ಮಾಡಿದ್ರೂ ಅದನ್ನ ನಿಯಂತ್ರಣ ಮಾಡೋಕೆ ಸಾಧ್ಯವಾಗ್ತಿಲ್ಲ.ಇದರಿಂದ ಬೇಸತ್ತ ಅಲ್ಲಿನ ನಾಗರಿಕರು ದೇಶವನ್ನೇ ತೊರೆಯುತ್ತಿದ್ದು ಭಾರತದ ಕಡೆಗೆ ಮುಖ ಮಾಡ್ತಿದ್ದಾರೆ. ವಲಸೆ ಬರ್ತಿದ್ದಾರೆ. ನಿನ್ನೆ 6 ಮಹಿಳೆಯರು, 5 ಮಕ್ಕಳು ಸೇರಿದಂತೆ ಸುಮಾರು 19 ಲಂಕಾ ಮೂಲದ ತಮಿಳರು ಭಾರತಕ್ಕೆ ವಲಸೆ ಬಂದಿದ್ದಾರೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೋಟ್ ಮೂಲಕ ಲಂಕೆಯಿಂದ ಹೊರಟಿರೋ ಇವರು ತಮಿಳುನಾಡಿನ ಧನುಷ್ಕೋಟಿ ಕರಾವಳಿ ತೀರಕ್ಕೆ ಬಂದಿದ್ದಾರೆ ಅಂತ ಮಾಹಿತಿ ಸಿಕ್ಕಿದೆ.
-masthmagaa.com
Contact Us for Advertisement