masthmagaa.com:
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೇಂದಾರ್ನಲ್ಲಿ ಉಗ್ರರ ಜೊತೆಗಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಅರಣ್ಯ ಭಾಗದಿಂದ ಯೋಧರ ಪಾರ್ಥಿವ ಶರೀರ ತರಲು ಸೇನೆ ಕಾರ್ಯಾಚರಣೆ ಶುರು ಮಾಡಿದೆ. ಅಂದಹಾಗೆ ಶಸ್ತ್ರಾಸ್ತ್ರ ಸಜ್ಜಿತ ಉಗ್ರರು ಈ ಭಾಗದ ಅರಣ್ಯದಲ್ಲಿ ಸೇರಿಕೊಂಡಿದ್ದು, ಅವರ ಬೇಟೆಗಾಗಿ ಯೋಧರು ಕಾರ್ಯಾಚರಣೆ ನಡೆಸ್ತಿದ್ದಾರೆ. ಸೋಮವಾರದಿಂದ ಈವರೆಗೆ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 7 ಮಂದಿ ಯೋಧರು ಪ್ರಾಣ ಕಳ್ಕೊಂಡಿದ್ದಾರೆ. ಎರಡ್ಮೂರು ತಿಂಗಳ ಹಿಂದೆಯೇ ಉಗ್ರರು ಕಾಡಿನಲ್ಲಿ ಸೇರಿಕೊಂಡು, ಅಡಗುತಾಣಗಳನ್ನು ರಚಿಸಿಕೊಂಡಿರಬಹುದು ಅಂತ ಅಂದಾಜಿಸಲಾಗಿದೆ. ಹೀಗಾಗಿ ಉಗ್ರರ ಬೇಟೆ ಸ್ವಲ್ಪ ಕಷ್ಟವಾಗ್ತಿದೆ ಅಂತ ಮೂಲಗಳು ತಿಳಿಸಿವೆ.
-masthmagaa.com
Contact Us for Advertisement