masthmagaa.com:
ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇವತ್ತು ಮಧ್ಯಾಹ್ನದವರೆಗೆ ಹೊಸದಾಗಿ 22 ಜನರಿಗೆ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡದಲ್ಲಿ 80 ವರ್ಷದ ವೃದ್ಧೆ (ರೋಗಿ ನಂಬರ್ 507) ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಆಂಧ್ರಪ್ರದೇಶದ 60 ವರ್ಷದ ವೃದ್ಧ (ರೋಗಿ ನಂಬರ್ 796) ಮೃತಪಟ್ಟಿದ್ದಾರೆ.
ಹೊಸದಾಗಿ ಪತ್ತೆಯಾದ 22 ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 5 ಕೇಸ್ಗಳು ದೃಢಪಟ್ಟಿವೆ. ಇದರಲ್ಲಿ 10 ವರ್ಷದೊಳಗಿನ ಮೂರು ಮಕ್ಕಳು, ಓರ್ವ ಪುರುಷ ಮತ್ತು ಓರ್ವ ಮಹಿಳೆ ಇದ್ದಾರೆ. ಈ ಪೈಕಿ 4 ಜನರು ರೋಗಿ ನಂಬರ್ 554ರ (20 ವರ್ಷದ ಪುರುಷ) ಸಂಪರ್ಕಕ್ಕೆ ಬಂದವರಾಗಿದ್ದಾರೆ. ಮತ್ತೊಬ್ಬರು ರೋಗಿ ನಂಬರ್ 555ರ (28 ವರ್ಷದ ಪುರುಷ) ಸಂಪರ್ಕಕ್ಕೆ ಬಂದವರಾಗಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹೊಸದಾಗಿ 4 ಪ್ರಕರಣಗಳು ದೃಢಪಟ್ಟಿವೆ. ಇವರೆಲ್ಲರೂ ಮುಂಬೈಗೆ ಪ್ರಯಾಣ ಮಾಡಿ ಬಂದವರಾಗಿದ್ದಾರೆ.
ಗದಗ ಜಿಲ್ಲೆಯಲ್ಲಿ ನಾಲ್ವರಿಗೆ ಸೋಂಕು ತಗುಲಿದೆ. ಇವರು ಗುಜರಾತ್ನ ಅಹಮದಾಬಾದ್ನಿಂದ ಬಂದವರಾಗಿದ್ದಾರೆ.
ಬೀದರ್ನಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಮೂವರು ಕಂಟೈನ್ಮೆಂಟ್ ಜೋನ್ ಸಂಪರ್ಕಕ್ಕೆ ಬಂದವರಾಗದ್ದು, ಒಬ್ಬರು ಮುಂಬೈ ನಂಟು ಹೊಂದಿದ್ದಾರೆ.
ಉಳಿದಂತೆ ದಾವಣಗೆರೆಯಲ್ಲಿ 3, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
-masthmagaa.com
Contact Us for Advertisement