masthmagaa.com:
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವ್ರ 23 ಅಡಿ ಎತ್ತರದ ಪ್ರತಿಮೆಯನ್ನ ಬಳ್ಳಾರಿಯಲ್ಲಿ ಅನಾವರಣ ಮಾಡಲಾಗಿದೆ. ಬಳ್ಳಾರಿ ಉತ್ಸವವದ ವೇಳೆ ನಗರದ ಜಿಲ್ಲಾ ಕ್ರೀಡಾಂಗಣದ ನಲ್ಲಚೇರುವು ಕೆರೆ ಪಕ್ಕದಲ್ಲಿ ನಿರ್ಮಿಸಿದ್ದು, ಸಚಿವ ಬಿ. ಶ್ರೀರಾಮುಲು ಅನಾವರಣಗೊಳಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಉಪಸ್ಥಿತರಿದ್ರು. ಇನ್ನು ಶಿವಮೊಗ್ಗದ ಹಿಂದೂ ಮಹಾಸಭೆ ಗಣಪತಿ ತಯಾರು ಮಾಡುವ ಕಲಾವಿದ ಜೀವನ್ ಈ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಶಿವಮೊಗ್ಗ ಸಮೀಪದ ನಿದಿಗೆಯಲ್ಲಿ ಈ ಪ್ರತಿಮೆ ನಿರ್ಮಾಣ ಕಾರ್ಯ ನಡೆದಿತ್ತು. ಮೂರು ತಿಂಗಳಿನಲ್ಲಿ 23 ಅಡಿಯ ಮೂರು ಸಾವಿರ ಕೆಜಿ ತೂಕದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಕಬ್ಬಿಣ, ಫೈಬರ್ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಿದ್ದ ಪ್ರತಿಮೆ ಈಗ ಬಳ್ಳಾರಿಯಲ್ಲಿ ಅನಾವರಣಗೊಂಡಿದೆ.
-masthmagaa.com
Contact Us for Advertisement