ಮರಳು ತುಂಬಿದ ಹಡಗಿಗೆ ಬೋಟ್​ ಡಿಕ್ಕಿ: 26 ಜನ ಜಲಸಮಾಧಿ

masthmagaa.com:

ಬಾಂಗ್ಲಾದೇಶದಲ್ಲಿ ಮತ್ತೊಂದು ಬೋಟ್​ ದುರಂತ ಸಂಭವಿಸಿ ಕನಿಷ್ಠ 26 ಜನ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. ಫುಲ್​ ರಶ್ ಆಗಿದ್ದ ಬೋಟ್​ವೊಂದು ಮರಳು ತುಂಬಿದ ಸರಕು ಸಾಗಣೆ ಹಡಗಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಬಳಿಕ ಪದ್ಮಾ ನದಿಯಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ 5 ಜನರನ್ನ ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳು ಬಾಂಗ್ಲಾದೇಶದ ನಾರಾಯಣ್​ಗಂಜ್​ನಲ್ಲಿ ದೋಣಿ ಅಪಘಾತ ಸಂಭವಿಸಿ ಸುಮಾರು 30 ಜನ ಮೃತಪಟ್ಟಿದ್ದರು. ಲಾಕ್​ಡೌನ್​ ಜಾರಿಯಾದ ಹಿನ್ನೆಲೆ ಇವರೆಲ್ಲಾ ತಮ್ಮ ತಮ್ಮ ಮನೆಗೆ ಹೋಗ್ತಿದ್ದಾಗ ಅಪಘಾತ ಸಂಭವಿಸಿತ್ತು. ಅಂದ್ಹಾಗೆ ತಗ್ಗು ಪ್ರದೇಶದಲ್ಲಿರೋ ಬಾಂಗ್ಲಾದೇಶದಲ್ಲಿ ಒಳನಾಡು ಜಲಸಾರಿಗೆ ವ್ಯವಸ್ಥೆ ವ್ಯಾಪಕವಾಗಿದೆ. ಆದ್ರೆ ಸುರಕ್ಷತಾ ಮಾನದಂಡಗಳಿಲ್ಲ. ಹೀಗಾಗಿ ಪ್ರತಿವರ್ಷ ನೂರಾರು ಜನ ದೋಣಿ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ.

-masthmagaa.com

Contact Us for Advertisement

Leave a Reply