masthmagaa.com:
ಶ್ರೀರಾಮ ನವಮಿ ನಿಮಿತ್ಯ `ಜೈ ಶ್ರೀರಾಮ್’ ಘೋಷಣೆ ಕೂಗ್ತಿದ್ದ ಯುವಕರ ಮೇಲೆ ಪುಂಡರು ಹಲ್ಲೆ ಮಾಡಿರೊ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪುಂಡರ ವಿರುದ್ದ FIR ದಾಖಲಾಗಿದ್ದು, ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಸದ್ಯ ಫರ್ಮಾನ್, ಸಮೀರ್ ಹಾಗೂ ಓರ್ವ ಅಪ್ರಾಪ್ತರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಅಂದ್ಹಾಗೆ ಜೈ ಶ್ರೀರಾಮ್ ಘೋಷಣೆ ಕೂಗ್ತಿದ್ದ ಯುವಕರ ಕಾರನ್ನ ಅಡ್ಡಗಟ್ಟಿ ಶ್ರೀರಾಮ್ ಬದಲಿಗೆ ಅಲ್ಲಾ ಹು ಅಕ್ಬರ್ ಅಂತೇಳಿ ಘೋಷಣೆ ಕೂಗ್ಬೇಕು ಅಂತ ಪುಂಡರು ಬೆದರಿಕೆ ಹಾಕಿ ಹಲ್ಲೆ ಮಾಡಿದ್ರು ಅಂತ ಯುವಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ಸ್ವರೂಪ ಕೂಡ ಪಡ್ಕೊಳ್ತಿದೆ.
-masthmagaa.com
Contact Us for Advertisement