masthmagaa.com:
ವಿಷಕಾರಿ ಚಾಕ್ಲೇಟ್ಗಳನ್ನ ತಿಂದು ನಾಲ್ಕು ಜನ ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಕುಷಿನಗರ ಜಿಲ್ಲೆಯ ಕಾಸ್ಯಾ ಎಂಬಲ್ಲಿ ನಡೆದಿದೆ. ಸ್ಥಳೀಯರ ಪ್ರಕಾರ, ದಿಲಿಪ್ನಗರದ ನಿವಾಸಿ ಮುಖಿಯಾ ದೇವಿ ಬೆಳಗ್ಗೆ ಕಸ ಗುಡಿಸೋವಾಗ ಐದು ಟೋಫೀ ಅಂದ್ರೆ ಚಾಕ್ಲೇಟ್ ಮತ್ತು ಕಾಯ್ನ್ಗಳು ಇರೋ ಕವರ್ನ ನೋಡಿದ್ದಾರೆ. ನಂತ್ರ ಅವ್ರು ಚಾಕ್ಲೇಟ್ಗಳನ್ನ ತನ್ನ ಮೂವರು ಮೊಮ್ಮಕ್ಕಳು ಮತ್ತು ಇನ್ನೊಬ್ಬ ಮಗುಗೆ ಕೊಟ್ಟಿದ್ದಾರೆ. ಇದನ್ನ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್, ಈ ಸಂಬಂಧ ತನಿಖೆ ನಡೆಸೋಕೆ ಸೂಚಿಸಿದ್ದಾರೆ.
-masthmagaa.com
Contact Us for Advertisement