ಮಹಾರಾಜ ರಂಜಿತ್‌ ಸಿಂಗ್‌ ಪುಣ್ಯಸ್ಮರಣೆಗೆ ಪಾಕಿಸ್ತಾನಕ್ಕೆ ತಲುಪಿದ 450 ಸಿಖ್‌ ಯಾತ್ರಿಕರು

masthmagaa.com:

ಮಹಾರಾಜ ರಂಜಿತ್‌ ಸಿಂಗ್‌ರ 183ನೇ ಪುಣ್ಯಸ್ಮರಣೆಯ ಸಲುವಾಗಿ 450 ಸಿಖ್ಖ್‌ ಯಾತ್ರಿಕರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಪುಣ್ಯಸ್ಮರಣೆ ಇದೇ ತಿಂಗಳ 29ನೇ ತಾರಿಖಿನಂದು ಲಾಹೋರ್‌ನ ಗುರುದ್ವಾರ ದೇರ ಸಾಹಿಬ್‌ನಲ್ಲಿ ನಡೆಯಲಿದೆ. ಇದೀಗ 450 ಯಾತ್ರಿಕರನ್ನ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಪವಿತ್ರ ಸ್ಥಳಗಳನ್ನು ನೋಡಿಕೊಳ್ಳುವ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಮತ್ತು ಪಾಕಿಸ್ತಾನದ ಗುರುದ್ವಾರ ಸಿಖ್ ಪ್ರಬಂಧಕ್ ಸಮಿತಿಯ ಅಧಿಕಾರಿಗಳು ವಾಘಾ ಗಡಿಯಲ್ಲಿ ಸ್ವಾಗತಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಯಾತ್ರಿಗಳು ಕರ್ತಾರಪುರ ಸಾಹಿಬ್ ಗುರುದ್ವಾರಕ್ಕು ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಮಹರಾರಾಜ ರಂಜಿಂತ್‌ ಸಿಂಗ್‌ ಸಿಖ್ಖ್‌ ಸಮ್ರಾಜ್ಯದ ಮೊಟ್ಟ ಮೊದಲ ಆಡಳಿತಗಾರ.

-masthmagaa.com

Contact Us for Advertisement

Leave a Reply