masthmagaa.com:
ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಂಬಲ್ ಸೇತುವೆ ಮೇಲೆ ಉಗ್ರರು ಗ್ರನೇಡ್ ಎಸೆದಿದ್ದಾರೆ. ಇದ್ರಲ್ಲಿ 6 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಉಗ್ರರು ಸೇನಾ ವಾಹನಗಳನ್ನು ಟಾರ್ಗೆಟ್ ಮಾಡಿ ಗ್ರನೇಡ್ ದಾಳಿ ನಡೆಸಿದ್ರು. ಆದ್ರೆ ಅದು ಮಿಸ್ ಆಗಿ ಪ್ರಯಾಣಿಕರಿದ್ದ ವಾಹನಕ್ಕೆ ಬಿದ್ದಿದೆ ಅಂತ ಸೇನಾ ಮೂಲಗಳು ಮಾಹಿತಿ ನೀಡಿವೆ. ಮೂರು ದಿನಗಳ ಜಮ್ಮು ಕಾಶ್ಮೀರ ಪ್ರವಾಸದ ಕೊನೆಯ ದಿನವಾದ ನಿನ್ನೆ ರಾತ್ರಿ ಅಮಿತ್ ಶಾ ಯೋಧರೊಂದಿಗೆ ಕಾಲ ಕಳೆದಿದ್ದಾರೆ. ಇದೇ ವೇಳೆ 2019ರಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ್ರು.
-masthmagaa.com
Contact Us for Advertisement