masthmagaa.com:
ವಿಶೇಷ ಸ್ಥಾನಮಾನ ವಾಪಸ್ ಪಡೆಯೋ ಮುನ್ನ ಜಮ್ಮು ಕಾಶ್ಮೀರಕ್ಕೆ ಅಂತ ನೀಡಲಾಗ್ತಿದ್ದ ಫಂಡ್ನ 80 ಪರ್ಸೆಂಟ್ ರಾಜಕಾರಣಿಗಳ ಜೇಬು ಸೇರುತ್ತಿತ್ತು ಅಂತ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾತನಾಡಿದ ಅವರು, ಆಗ ದುಡ್ಡು ಜನರನ್ನು ತಲುಪುತ್ತಲೇ ಇರಲಿಲ್ಲ. ಆದ್ರೀಗ ಕಾಶ್ಮೀರ ಕಣಿವೆ ನೇರವಾಗಿ ಅಭಿವೃದ್ಧಿಯಾಗ್ತಿದೆ. ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಈಗಿನ ಪರಿಸ್ಥಿತಿ ನೋಡಿದ್ದೀನಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement