masthmagaa.com:
ಕಿಚ್ಚ ಸುದೀಪ್ ಸಧ್ಯ ಕರ್ನಾಟಕ ವಿಧಾನಸಬಾ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೇನು ಮೇ 10 ರಂದು ಚುನಾವಣೆ ಮುಗಿಯುತ್ತದೆ. ಬಳಿಕ ಸುದೀಪ್ ಸಿನಿಮಾ ಕಡೆ ಗಮನ ಹರಿಸಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮೇ 22 ರಿಂದ ʻಕಿಚ್ಚ 46ʼ ಸಿನಿಮಾದ ಪ್ರೋಮೊ ಶೂಟಿಂಗ್ ಶುರುವಾಗಲಿದೆ ಎಂದಿದ್ದಾರೆ. ತುಂಬಾ ಮಹತ್ವದ ಸುದ್ದಿಗಾಗಿ ಜೂನ್ 1 ಕ್ಕೆ ತಯಾರಾಗಿರಿ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ʻವಿಕ್ರಾಂತ ರೋಣʼ ಸಿನಿಮಾ ಬಳಿಕ ಸುದೀಪ್ ಅವರು ಬ್ರೆಕ್ ತೆಗೆದುಕೊಂಡಿದ್ದರು. ಬಳಿಕ ಸಿಸಿಎಲ್ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಸಿಸಿಎಲ್ ವೇಳೆ ಸುದೀಪ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ವಿಕ್ರಾಂತ್ ರೋಣ ಬಳಿಕ ನಾನು ಬ್ರೆಕ್ ತೆಗೆದುಕೊಂಡಿದ್ದೇನೆ ಎಂದಿದ್ದರು. ಕ್ರಿಕೆಟ್ ಅಂದರೆ ನನಗೆ ಬಹಳ ಇಷ್ಟ, ನಾನು ಈ ಬ್ರೇಕನಲ್ಲಿ ಕ್ರಿಕೆಟ್ ಆಡಿ ರಿಲ್ಯಾಕ್ಸ್ ಆಗುತ್ತೇನೆ ಅಂತ ಸುದೀಪ್ ಹೇಳಿದ್ದರು.
ಚುನಾವಣೆ ಪ್ರಚಾರದ ನಂತರ ಸುದೀಪ್ ಮೂರು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ತಮಿಳಿನ ಹಿಟ್ ನಿರ್ದೇಶಕ ಚರಣ್ ಅವರ ಬಹುಭಾಷಾ ಸಿನಿಮಾದಲ್ಲಿ ಸುದೀಪ್ ನಟಿಸುವುದು ಖಚಿತವಾಗಿದೆ. ಬಳಿಕ ನಂದ ಕೀಶೊರ್ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ಮಿಂಚಲಿದ್ದಾರೆ ಎನ್ನಲಾಗುತ್ತಿದೆ. ಮೊದಲು ಅನುಪ್ ಭಂಡಾರಿ ನಿರ್ದೇಶನದ ʻಬಿಲ್ಲಾ ರಂಗ ಬಾಷಾʼ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇದೇ ಸುದೀಪ್ ಅವರು ಹೇಳುತ್ತಿರುವ ʻಕಿಚ್ಚಾ46ʼ ಸಿನಿಮಾ ಎಂದು ಹೇಳಲಾಗುತ್ತಿದೆ. ಆದ್ರೆ ಸುದೀಪ್ ಅವರು ಮಾತ್ರ ʻಕಿಚ್ಚ 46ʼ ಸಿನಿಮಾ ಯಾವುದು ಎಂದು ಹೇಳಿಲ್ಲ. ಕೇವಲ ಟ್ವಿಟ್ ಮಾಡಿ ʻಕಿಚ್ಚಾ46ʼ ಸಿನಿಮಾದ ಚಿತ್ರೀಕರಣ ಮೇ 22 ರಿಂದ ಶುರುವಾಗಲಿದೆ ಎಂದಷ್ಟೇ ಹೇಳಿದ್ದಾರೆ. ಇನ್ನು ʻಕಿಚ್ಚ 46ʼ ಸಿನಿಮಾ ಯಾವುದು ಎಂದು ಕಾದು ನೋಡಬೇಕು.
Contact Us for Advertisement