masthmagaa.com:
ಚಂದ್ರನ ಅಂಗಳಕ್ಕೆ ಇಳಿಯುವ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಬಾಹ್ಯಾಕಾಶ ನೌಕೆ, ತನ್ನ ಎರಡನೇ orbit-raising manoeuvre ಪೂರ್ಣಗೊಳಿಸಿದೆ. ಇಲ್ಲಿ ಆರ್ಬಿಟ್ ರೈಸಿಂಗ್ ಮ್ಯಾನುವರ್ ಅಂದ್ರೆ ಪಥ ಬದಲಿಸೋದು ಅಂತ ಅರ್ಥ… ಈಗ ಬಾಹ್ಯಾಕಾಶ ನೌಕೆ ಚಂದ್ರನತ್ತ ಹೋಗ್ಬೇಕಂದ್ರೆ ಭೂಮಿಯ ಗುರುತ್ವಾಕರ್ಷಣ ಬಲವನ್ನ ಮೀರಿದ ಬಲವನ್ನ ಪಡೀಬೇಕು. ಇದನ್ನ ಎಸ್ಕೇಪ್ ವೆಲಾಸಿಟಿ ಅಂತ ಹೇಳ್ತೀವಿ. ಸೋ ಈ ಎಸ್ಕೇಪ್ ವೆಲಾಸಿಟಿ ವೇಗ ಸಿಗೋವರೆಗು ನೌಕೆ ಭೂಮಿಯ ಸುತ್ತ ಸುತ್ತುತಾ ಇರುತ್ತೆ. ಪ್ರತಿ ಸುತ್ತಿಗೂ ನೌಕೆಯ ವೇಗ ಜಾಸ್ತಿ ಆಗುತ್ತೆ, ಜೊತೆಗೆ ಭೂಮಿಯಿಂದ ದೂರವಾಗ್ತಾ ಹೋಗುತ್ತೆ. ಸೋ ಈಗ ಆ ರೀತಿ 2 ಸುತ್ತು ಹಾಕಿ 3ನೇ ಸುತ್ತಿಗೆ ಕಕ್ಷೆ ಬದಲಿಸಲಾಗಿದೆ ಅಂತ ಇಸ್ರೋ ಹೇಳಿದೆ. ಚಂದ್ರಯಾನ ನೌಕೆ ಈಗ ಭೂಮಿಗೆ ಹತ್ತಿರವಿದ್ದಾಗ 226 ಕಿ.ಮೀ ಹಾಗು ದೂರವಿದ್ದಾಗ 41,603 ಕಿ.ಮೀ ಇರುವ ಕಕ್ಷೆಯಲ್ಲಿದೆ. ನಾಳೆ ಮಧ್ಯಾಹ್ನ 2ರಿಂದ 3 ಗಂಟೆಯ ಸಮಯದಲ್ಲಿ ನೌಕೆ ಭೂಮಿಗೆ ಮತ್ತೆ ಹತ್ತಿರ ಬರಲಿದ್ದು ಆಗ ಮತ್ತೆ ಎಂಜಿನ್ಗಳನ್ನ ಫೈರ್ ಮಾಡಲಿದ್ದೇವೆ ಅಂತ ಇಸ್ರೋ ಹೇಳಿದೆ. ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಸೆಂಟರ್ನಿಂದ ಆರ್ಬಿಟ್ ರೈಸಿಂಗ್ ಪ್ರಕ್ರಿಯೆಯನ್ನ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ. ಇನ್ನು ಅತ್ತ ಸಂದರ್ಶನ ಒಂದ್ರಲ್ಲಿ ಮಾತಾಡಿರೋ ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್, ಚಂದ್ರಯಾನ-3 ಚಂದ್ರಯಾನ-1 ಬಿಟ್ಟಲ್ಲಿಂದ ಕೆಲಸ ಶುರು ಮಾಡುತ್ತೆ, ಚಂದ್ರನ ಮೇಲೆ ಜೀವಿಗಳಿಗೆ ಪೂರಕ ವಾತಾವರಣ, ಸಂಪನ್ಮೂಲಗಳು ಇದೆಯಾ ಅಂತ ನೋಡುತ್ತೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement