masthmagaa.com:
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ನ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾಗಿದ್ರು ಎನ್ನಲಾದ ಗಂಗಾಧರ್ ಅನ್ನೋರ ಹೇಳಿಕೆಯನ್ನ ಇವತ್ತು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆ ವ್ಯಕ್ತಿ, ನಾನು ದಲಿತ ಅಲ್ಲ. ಹೋಟೆಲ್ನಲ್ಲಿ ಸೇವೆ ಕೊಡೋದು ತಡವಾಯ್ತು ಅನ್ನೋದಕ್ಕೆ ಸಂಬಂಧಿಸಿದಂತೆ ದರ್ಶನ್ ಸ್ವಲ್ಪ ರ್ಯಾಶ್ ಆಗಿ ಮಾತನಾಡಿದ್ರು. ಅದ್ ಬಿಟ್ರೆ ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಅಂತ ಹೇಳಿದ್ದಾರೆ. ಇನ್ನು ಗಂಗಾಧರ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ಅವರ ಕುಟುಂಬಸ್ಥರು ಹೋಟೆಲ್ ಬಳಿ ಪೊರಕೆ ಹಿಡ್ಕೊಂಡು ಬಂದಿದ್ರು ಅನ್ನೋ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾನೊಬ್ಬ ಬ್ಯಾಚುಲರ್. ನಂಗೆ ಕುಟುಂಬನೇ ಇಲ್ಲ ಎಂದಿದ್ದಾರೆ. ಇದೆಲ್ಲದರ ನಡುವೆ ಸಂದೇಶ್ ಪ್ರಿನ್ಸ್ ಹೋಟೆಲ್ನ ಮಾಲೀಕ ಸಂದೇಶ್ ಮತ್ತು ಇಂದ್ರಜಿತ್ ಲಂಕೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಅದರಲ್ಲಿ ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದಾರೆ ಸಂದೇಶ್. ಇದೇ ವಿಚಾರವಾಗಿ ಇವತ್ತು ಸಂಜೆ ಮತ್ತೆ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್, ಸಾಮಾಜಿಕ ಹಿತದೃಷ್ಟಿ ಮತ್ತು ಕಳಕಳಿಯಿಂದ ನಾನು ಹೋರಾಟ ಮಾಡುತ್ತಿದ್ದೇನೆ. ಹಲ್ಲೆ ಮಾಡಿದವರು ದರ್ಶನ್ ಆಗಿರಲಿ ಅಥವಾ ಇನ್ಯಾರೆ ಆಗಿರಲಿ ಕ್ಷಮೆ ಕೇಳಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement