ದರ್ಶನ್, ಹಲ್ಲೆ ಮತ್ತು ವಿವಾದ! ಇವತ್ತು ಏನೇನಾಯ್ತು?

masthmagaa.com:

ಮೈಸೂರಿನ ಸಂದೇಶ್​ ಪ್ರಿನ್ಸ್​ ಹೋಟೆಲ್​ನ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾಗಿದ್ರು ಎನ್ನಲಾದ ಗಂಗಾಧರ್​ ಅನ್ನೋರ ಹೇಳಿಕೆಯನ್ನ ಇವತ್ತು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆ ವ್ಯಕ್ತಿ, ನಾನು ದಲಿತ ಅಲ್ಲ. ಹೋಟೆಲ್​ನಲ್ಲಿ ಸೇವೆ ಕೊಡೋದು ತಡವಾಯ್ತು ಅನ್ನೋದಕ್ಕೆ ಸಂಬಂಧಿಸಿದಂತೆ ದರ್ಶನ್​ ಸ್ವಲ್ಪ ರ್ಯಾಶ್​ ಆಗಿ ಮಾತನಾಡಿದ್ರು. ಅದ್​ ಬಿಟ್ರೆ ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಅಂತ ಹೇಳಿದ್ದಾರೆ. ಇನ್ನು ಗಂಗಾಧರ್ ಮೇಲೆ ಹಲ್ಲೆ ನಡೆಸಿದ್ದಕ್ಕೆ ಅವರ ಕುಟುಂಬಸ್ಥರು ಹೋಟೆಲ್​ ಬಳಿ ಪೊರಕೆ ಹಿಡ್ಕೊಂಡು ಬಂದಿದ್ರು ಅನ್ನೋ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾನೊಬ್ಬ ಬ್ಯಾಚುಲರ್. ನಂಗೆ ಕುಟುಂಬನೇ ಇಲ್ಲ ಎಂದಿದ್ದಾರೆ. ಇದೆಲ್ಲದರ ನಡುವೆ ಸಂದೇಶ್​ ಪ್ರಿನ್ಸ್ ಹೋಟೆಲ್​ನ ಮಾಲೀಕ ಸಂದೇಶ್ ಮತ್ತು ಇಂದ್ರಜಿತ್ ಲಂಕೇಶ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ. ಅದರಲ್ಲಿ ದರ್ಶನ್​ ಮತ್ತು ಅವರ ಸ್ನೇಹಿತರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದಾರೆ ಸಂದೇಶ್​. ಇದೇ ವಿಚಾರವಾಗಿ ಇವತ್ತು ಸಂಜೆ ಮತ್ತೆ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್, ಸಾಮಾಜಿಕ ಹಿತದೃಷ್ಟಿ ಮತ್ತು ಕಳಕಳಿಯಿಂದ ನಾನು ಹೋರಾಟ ಮಾಡುತ್ತಿದ್ದೇನೆ. ಹಲ್ಲೆ ಮಾಡಿದವರು ದರ್ಶನ್ ಆಗಿರಲಿ ಅಥವಾ ಇನ್ಯಾರೆ ಆಗಿರಲಿ ಕ್ಷಮೆ ಕೇಳಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply