ಪಾಕಿಸ್ತಾನ ಬಳೆ ತೊಟ್ಕೊಂಡಿಲ್ಲ ಎಂದ ಫಾರೂಕ್‌ ಅಬ್ದುಲ್ಲಾ!

masthmagaa.com:

ಪಾಕ್‌ ಆಕ್ರಮಿತ್‌ ಕಾಶ್ಮೀರದ ಜನರೇ ಭಾರತದೊಂದಿಗೆ ವಿಲೀನಗೊಳ್ಳಲು ಮುಂದಾಗ್ತಾರೆ ಅಂತ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇತ್ತೀಚಿಗೆ ಹೇಳಿಕೆ ನೀಡಿದ್ರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಮ್ಮುಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಹೇಳಿಕೆ ಕೊಟ್ಟಿದ್ದಾರೆ. ರಾಜನಾಥ್‌ ಸಿಂಗ್‌ ಅದನ್ನ ವಶಪಡೀತಿವಿ ಅಂತೇಳ್ತಿದ್ದಾರೆ. ಹೋಗಲಿ, ಬೇಡ ಅಂದವರು ಯಾರು? ಆದರೆ ನೆನಪಿಡಿ.. ಪಾಕಿಸ್ತಾನ ಕೂಡ ಕೈಯಲ್ಲಿ ಬಳೆ ತೊಟ್ಕೊಂಡು ಕೂತಿಲ್ಲ. ಅವರೂ ಅಣ್ವಸ್ತ್ರಗಳನ್ನ ಹೊಂದಿದ್ದಾರೆ. ದುರದೃಷ್ಟವಶಾತ್‌ ಆ ಸ್ಫೋಟಕಗಳು ನಮ್ಮ ಮೇಲೆ ಬೀಳುತ್ವೆ ಅಂತ ಫಾರೂಕ್‌ ಅಬ್ದುಲ್ಲಾ ಒಂದು ರೀತಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply