masthmagaa.com:
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಟ್ಟಹಾಸ ಮುಂದುವರಿಸಿದ್ದಾರೆ. ಕಾಬೂಲ್ನಲ್ಲಿರೋ ಗುರುದ್ವಾರ ಕರ್ತೇ ಪರ್ವಾನ್ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಗುರುದ್ವಾರವನ್ನು ಧ್ವಂಸಗೊಳಿಸಿ, ಅಲ್ಲಿದ್ದವರನ್ನು ತಮ್ಮ ವಶಕ್ಕೆ ಪಡೆದಿದ್ದು, ಬಂಧಿಗಳನ್ನಾಗಿ ಮಾಡಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಇಂಡಿಯನ್ ವರ್ಲ್ಡ್ ಫೋರಂನ ಅಧ್ಯಕ್ಷ ಪುನೀತ್ ಸಿಂಗ್ ಚಂಡೋಕ್, ಗುರುದ್ವಾರ ಕರ್ತೇಗೆ ಕೆಲ ಬಂದೂಕುಧಾರಿ ತಾಲಿಬಾನಿಗಳು ನುಗ್ಗಿದ್ದಾರೆ. ಅಲ್ಲಿದ್ದ ಸಿಖ್ ಸಮುದಾಯದ ಜನರನ್ನು ತಮ್ಮ ಕಸ್ಟಡಿಗೆ ತಗೊಂಡಿದ್ದಾರೆ. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ ಅಂತ ಮಾಹಿತಿ ಸಿಕ್ಕಿದೆ ಅಂತ ಹೇಳಿದ್ದಾರೆ. ಇತ್ತೀಚೆಗಷ್ಟೇ ಪಕ್ತಿಕಾ ಪ್ರಾಂತ್ಯದಲ್ಲಿ ಗುರುದ್ವಾರದ ಮೇಲ್ಛಾವಣಿಯಲ್ಲಿದ್ದ ಬಾವುಟವನ್ನು ತಾಲಿಬಾನಿಗಳು ತೆಗೆದಿದ್ರು.
-masthmagaa.com
Contact Us for Advertisement