masthmagaa.com:
ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಿಸಿದೆ. ಸದ್ಯ ಪಂಜಾಬ್ನ ಸಂಗ್ರೂರ್ ಕ್ಷೇತ್ರದಿಂದ ಸಂಸದರಾಗಿರೋ ಭಗವಂತ್ ಮನ್ ಆಪ್ನ ಸಿಎಂ ಕ್ಯಾಂಡಿಡೇಟ್ ಆಗಿದ್ದಾರೆ. ಇದನ್ನ ದೆಹಲಿ ಸಿಎಂ ಮತ್ತು ಪಕ್ಷದ ನ್ಯಾಷನಲ್ ಕನ್ವೆನರ್ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಅಂದ್ಹಾಗೆ ಯಾರು ಸಿಎಂ ಕ್ಯಾಂಡಿಡೇಟ್ ಆಗ್ಬೇಕು ಅನ್ನೋದಕ್ಕೆ ಪಕ್ಷವು ಫೋನ್ ಲೈನ್ ಮೂಲಕ ಸರ್ವೆ ನಡೆಸಿತ್ತು. ಅದರಲ್ಲಿ 93 ಪರ್ಸೆಂಟ್ ಜನರ ಆಯ್ಕೆ ಭಗವಂತ್ ಮನ್ ಆಗಿತ್ತು. ಕಾಲೇಜ್ ಡ್ರಾಪೌಟ್ ಆಗಿರೋದು ಇವರು, ಸ್ಟಾಂಡಪ್ ಕಾಮಿಡಿಯನ್ ಆಗಿ ಮಿಂಚಿದ್ರು. ಹಲವು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಕೂಡ. 2011ರಿಂದ ರಾಜಕೀದಲ್ಲಿರೋ ಇವರಿಗೀಗ 48 ವರ್ಷ. ರಾಜಕೀಯಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿದ್ರು. ಆಮ್ ಆದ್ಮಿ ಪಕ್ಷದ ಗೋವಾ ಸಿಎಂ ಅಭ್ಯರ್ಥಿ ಯಾರು ಅನ್ನೋದು ನಾಳೆ ಅನೌನ್ಸ್ ಆಗಲಿದೆ.
-masthmagaa.com
Contact Us for Advertisement