masthmagaa.com:
ದೆಹಲಿ: ಗಡಿಯಲ್ಲಿ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ದಮಾನ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇವತ್ತು ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಿದ್ರು. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್ ಏರ್ಸ್ಟ್ರೈಕ್ ನಡೆಸಿತ್ತು. ಇದ್ರ ಮರುದಿನವೇ ಅಂದ್ರೆ 2019ರ ಫೆಬ್ರುವರಿ 27ರಂದು ಗಡಿಯತ್ತ ಎಫ್ 16 ಯುದ್ಧ ವಿಮಾನ ಹಿಡ್ಕೊಂಡು ಬಂದಿತ್ತು ಪಾಕಿ ಪಡೆ. ಈ ವೇಳೆ ಮಿಗ್ 21 ಏರಿ ಹೊರಟಿದ್ದ ಅಭಿನಂದನ್ ವರ್ಧಮಾನ್ ಅದನ್ನು ಹೊಡೆದುರುಳಿಸಿದ್ರು. ಈ ವೇಳೆ ಅಭಿನಂದನ್ ವರ್ಧಮಾನ್ ವಿಮಾನಕ್ಕೂ ಹಾನಿಯಾಗಿ, ಪಾಕ್ ಗಡಿಯೊಳಗೆ ಇಳಿದಿದ್ರು. ಪಾಕಿಗಳ ಕೈಗೆ ಸೆರೆಸಿಕ್ಕಿದ್ದ ಅವರನ್ನು ಒಂದೇ ದಿನದಲ್ಲಿ ಭಾರತಕ್ಕೆ ಕರೆತರಲಾಗಿತ್ತು. ಇನ್ನು ಇವರ ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಪ್ರಕಾಶ್ ಜಾಧವ್ಗೆ ಮರಣೋತ್ತರ ಕೀರ್ತಿ ಚಕ್ರ, ಮೇಜರ್ ವಿಭೂತಿ ಶಂಕರತ್ ಧೌಂಡಿಯಾಲ್ ಮತ್ತು ನೈಬ್ ಸುಬೇದಾರ್ ಸೋಮ್ಬೀರ್ ಮರಣೋತ್ತರ ಶೌರ್ಯ ಚಕ್ರ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಲಾಗಿದೆ.
-masthmagaa.com
Contact Us for Advertisement