masthmagaa.com:
ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿಂದ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗ್ತಾನೆ ಇದೆ. ಸಿನಿಮಾ ಯಾರಿಗೂ ಇಷ್ಟ ಆಗದೇ ಇದ್ರೂ ಕೂಡ ಸುಮಾರು 300 ಕೋಟಿ ಕಲೆಕ್ಷನ್ ಮಾಡಿದೆ. ಆದಿಪುರುಷ್ ಸಿನಿಮಾದ ನಿರ್ದೇಶಕ ಓಂ ರಾವುತ್ ಅವರಿಗೆ ಜನ ಹಿಗ್ಗಾ ಮುಗ್ಗಾ ಬೈತಾ ಇದಾರೆ. ರಾಮ, ರಾವಣ, ಸೀತೆ ಯಾವ ಪಾತ್ರವನ್ನೂ ಸಹ ತೆರೆಮೇಲೆ ಸರಿಯಾಗಿ ತೋರಿಸಿಲ್ಲ ಅನ್ನೋದು ಅಭಿಮಾನಿಗಳ ವಾದ ಆಗಿತ್ತು. ಸಿನಿಮಾ ರಿಲೀಸ್ ಆದಾಗಿನಿಂದ ಏನೂ ಮಾತಾಡದೇ ಇರೋ ನಿರ್ದೇಶಕ ಓಂ ರಾವುತ್ ಕೊನೆಗೂ ಮೌನ ಮುರಿದಿದ್ದಾರೆ. ಎಲ್ಲಾ ಟೀಕೆ ಟಿಪ್ಪಣಿಗಳನ್ನ ಕೇಳಿದ ನಿರ್ದೇಶಕ ತಮ್ಮ ಆ ಎಲ್ಲಾ ಟೀಕೆಗಳಿಗೂ ಕೊನೆಗೂ ಪ್ರತ್ಯುತ್ತರ ಕೊಟ್ಟಿದ್ದಾರೆ.
“ರಾಮಾಯಣ ಗ್ರಂಥ ತುಂಬಾನೇ ದೊಡ್ಡ ಇದೆ. ಅದನ್ನ ಅರ್ಥ ಮಾಡಿಕೊಳ್ಳೊದು ತುಂಬಾನೇ ಕಷ್ಟ ಕೂಡ ಹೌದು. ಈ ಗ್ರಂಥ ಅರ್ಥ ಆಗಿದೆ ಅಂತ ಯಾರಾದ್ರು ಹೇಳಿದ್ರೆ ನಾನು ಅವರನ್ನ ಮೂರ್ಖ ಅಥ್ವಾ ಸುಳ್ಳು ಹೇಳ್ತಾ ಇದಾರೆ ಅಂತ ಅಂದ್ಕೋಳ್ತೀನಿ. ನಾವು ಹಿಂದೆ ದೂರದರ್ಶನದಲ್ಲಿ ನೋಡಿದ ರಾಮಾಯಣದಲ್ಲಿ ಇಡೀ ಕತೆಯನ್ನ ಹೇಳಿದ್ದಾರೆ. ಆದ್ರೆ ನಾವು ಮಾಡಿದ ಆದಿಪುರುಷ್ ಮೂವಿಯಲ್ಲಿ ಕೇವಲ ಒಂದು ಸೀನ್ ಅನ್ನ ಮಾತ್ರ ಹೇಳಿದೀವಿ. ನಾವು ಈ ಮೂವಿಯಲ್ಲಿ ಆದಿಪುರುಷ್ ಅಂದ್ರೆ ಏನು ಅಂತ ಹೇಳಿದೀವಿ. ಇದು ರಾಮಾಯಣ ಅಲ್ಲ, ರಾಮಾಯಣದ ಒಂದು ಭಾಗ ಅಷ್ಟೇ. ಯುದ್ಧ ಅಗಿದ್ದು ಹೇಗೆ ಅನ್ನೋದನ್ನ ಮಾತ್ರ ನಾವು ತೋರಿಸಿದೀವಿ ಅಷ್ಟೇ” ಅಂತ ಹೇಳಿದ್ದಾರೆ.
-masthmagaa.com
Contact Us for Advertisement