masthmagaa.com:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂದ್ರೆ ಕೊರೋನಾ ಕಮ್ಮಿ ಇರೋ ಜಿಲ್ಲೆಗಳಲ್ಲಿ 9ರಿಂದ 12ನೇ ತರಗತಿಗಳು ಆರಂಭವಾಗಿವೆ. ಕೆಲ ಶಾಲೆಗಳಲ್ಲಿ ಶಿಕ್ಷಕರು ಆರತಿ ಎತ್ತಿ ಮಕ್ಕಳಿಗೆ ಸ್ವಾಗತ ಮಾಡಿದ್ರು. ಶಾಲೆ ಓಪನ್ ಬಗ್ಗೆ ಮಾತನಾಡಿರೋ ವಿದ್ಯಾರ್ಥಿಗಳು, ಆನ್ಲೈನ್ ಕ್ಲಾಸ್ನಿಂದ ಮಾನಸಿಕವಗಿ ಬೆಂದು ಹೋಗಿದ್ವಿ. ಇಂಟರ್ನೆಟ್ ಸಮಸ್ಯೆ ಆಗ್ತಿತ್ತು. ಈಗ ತರಗತಿಗಳು ಶುರುವಾಗಿರೋದು ಖುಷಿಯಾಗಿದೆ. ಏನಾದ್ರೂ ಡೌಟ್ ಇದ್ರೆ ಡೈರೆಕ್ಟ್ ಆಗಿ ಶಿಕ್ಷಕರ ಜೊತೆ ಕೇಳಬಹುದು ಎಂದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ವಿದ್ಯಾಥಿಗಳ ಜೊತೆ ಮಾತನಾಡಿದ್ರು. ಈ ವೇಳೆ ವಿದ್ಯಾರ್ಥಿಗಳು ಕೋವಿಡ್ ನಿಯಮಗಳನ್ನ ಪಾಲಿಸುವಂತೆ ಸೂಚಿಸಿದ್ರು.
-masthmagaa.com
Contact Us for Advertisement