ಇವತ್ತು ಶಾಲೆಯಲ್ಲಿ ಮಕ್ಕಳಿಗೆ ಹೇಗೆಲ್ಲಾ ಸ್ವಾಗತ ಕೋರಿದ್ರು ಗೊತ್ತಾ?

masthmagaa.com:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂದ್ರೆ ಕೊರೋನಾ ಕಮ್ಮಿ ಇರೋ ಜಿಲ್ಲೆಗಳಲ್ಲಿ 9ರಿಂದ 12ನೇ ತರಗತಿಗಳು ಆರಂಭವಾಗಿವೆ. ಕೆಲ ಶಾಲೆಗಳಲ್ಲಿ ಶಿಕ್ಷಕರು ಆರತಿ ಎತ್ತಿ ಮಕ್ಕಳಿಗೆ ಸ್ವಾಗತ ಮಾಡಿದ್ರು. ಶಾಲೆ ಓಪನ್ ಬಗ್ಗೆ ಮಾತನಾಡಿರೋ ವಿದ್ಯಾರ್ಥಿಗಳು, ಆನ್​ಲೈನ್ ಕ್ಲಾಸ್​​ನಿಂದ ಮಾನಸಿಕವಗಿ ಬೆಂದು ಹೋಗಿದ್ವಿ. ಇಂಟರ್​ನೆಟ್​ ಸಮಸ್ಯೆ ಆಗ್ತಿತ್ತು. ಈಗ ತರಗತಿಗಳು ಶುರುವಾಗಿರೋದು ಖುಷಿಯಾಗಿದೆ. ಏನಾದ್ರೂ ಡೌಟ್ ಇದ್ರೆ ಡೈರೆಕ್ಟ್ ಆಗಿ ಶಿಕ್ಷಕರ ಜೊತೆ ಕೇಳಬಹುದು ಎಂದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ವಿದ್ಯಾಥಿಗಳ ಜೊತೆ ಮಾತನಾಡಿದ್ರು. ಈ ವೇಳೆ ವಿದ್ಯಾರ್ಥಿಗಳು ಕೋವಿಡ್​ ನಿಯಮಗಳನ್ನ ಪಾಲಿಸುವಂತೆ ಸೂಚಿಸಿದ್ರು.

-masthmagaa.com

Contact Us for Advertisement

Leave a Reply