masthmagaa.com:
ಹಿಜಬ್ ಕದನ ಶುರುವಾದ್ಮೇಲೆ ಹಿಂದೂ ಪರ ಸಂಘಟನೆಗಳು ಒಂದಾದ್ಮೇಲೆ ಒಂದರಂತೆ ಅಭಿಯಾನಗಳನ್ನು ನಡೆಸುತ್ತಲೇ ಇವೆ. ಅವುಗಳ ಸಾಲಿಗೆ ಈಗ ಮತ್ತೊಂದು ಬಾಯ್ಕಾಟ್ ಅಭಿಯಾನ ಸೇರ್ಪಡೆಯಾಗಿದೆ. ಅದೇ ಮುಸ್ಲಿಂ ಟ್ರಾವೆಲ್ಸ್ ಮತ್ತು ಚಾಲಕರನ್ನು ಬಹಿಷ್ಕರಿಸುವ ಅಭಿಯಾನ.. ಹಿಂದೂಗಳ ಪುಣ್ಯ ಕ್ಷೇತ್ರಗಳಿಗೆ ಹೋಗುವಾಗ ಮುಸ್ಲಿಮರ ವಾಹನಗಳನ್ನು ಬಳಸಬೇಡಿ. ಹಿಂದೂಗಳ ವಾಹನಗಳನ್ನೇ ಬುಕ್ ಮಾಡಿ.. ಹಿಂದೂ ಚಾಲಕರನ್ನೇ ಕರೆದುಕೊಂಡು ಹೋಗಿ ಅಂತ ಕರೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಓಲಾ, ಊಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮಾತನಾಡಿ, ಧರ್ಮದ ಹೆಸರಲ್ಲಿ ವಿಷಬೀಜ ಬಿತ್ತಲಾಗುತ್ತಿದೆ. ಕೆಲವೊಂದಿಷ್ಟು ಜನ ತಂದಿಟ್ಟು ತಮಾಷೆ ನೋಡ್ತಿದ್ದಾರೆ. ಕೊರೋನಾ ನಡುವೆ ಪರದಾಡುವಾಗ ಯಾರೂ ಬರಲಿಲ್ಲ ಅಂತ ಕೆಂಡಕಾರಿದ್ದಾರೆ.
-masthmagaa.com
Contact Us for Advertisement