‘ನೀನು ಕುಡಿದಿದ್ದೆ ಅಂತ ಹೇಳುʼ ನೂಪುರ್‌ ಪ್ರಕರಣದ ಆರೋಪಿಗೆ ಪೊಲೀಸರು ಹೇಳಿ ಕೊಟ್ಟಿದ್ದೇನು?

masthmagaa.com:

ನೂಪುರ್‌ ಶರ್ಮಾ ಶಿರಚ್ಚೇದ ಮಾಡಿದವ್ರಿಗೆ ತನ್ನ ಮನೆಯನ್ನ ಕೋಡೋದಾಗಿ ವಿಡಿಯೋ ಶೇರ್‌ ಮಾಡಿದ್ದ ಅಜ್ಮೇರ್‌ ದರ್ಗಾದ ಮುಖಂಡ ಖಾದೀಮ್‌ ಸಲ್ಮಾನ್‌ ಚಿಸ್ತಿಯನ್ನ ಅಲ್ಲಿನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇನ್ನು ಉದಯಪುರ್‌ ಕನ್ಹಯ್ಯ ಲಾಲ್‌ ಹತ್ಯೆಗೂ ಮುಂಚೆನೇ ಈ ವಿಡಿಯೋವನ್ನ ರೆಕಾರ್ಡ್‌ ಮಾಡಲಾಗಿತ್ತು. ಆದ್ರೆ ಇಂಟರ್‌ನೆಟ್‌ನಲ್ಲಿ ಈಗ ಬೆಳಕಿಗೆ ಬಂದಿದೆ. ಇನ್ನು ಈತನನ್ನ ಅರೆಸ್ಟ್‌ ಮಾಡಿ ಕರೆದುಕೊಂಡು ಹೋಗುವಾಗ, ನೀನು ಕುಡಿದಿದ್ದೆ ಅಂತ ಹೇಳು ಎಂದು ಅಲ್ಲಿನ ಪೊಲೀಸರು ಹೇಳಿಕೊಡ್ತಿರೋದು ವಿಡಿಯೋದಲ್ಲಿ ಬಹಿರಂಗವಾಗಿದೆ. ಇದಕ್ಕೆ ಬಿಜೆಪಿ, ರಾಜಸ್ಥಾನ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಶಿರಚ್ಚೇದದ ಬೆದರಿಕೆ ನೀಡಿದ ಆರೋಪಿಯನ್ನ ಬೆಂಬಲಿಸಿದೆ ಅಂತ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply