ನಿಜ್ಜರ ಹತ್ಯೆ ವಿಚಾರದಲ್ಲಿ ಟ್ರುಡೋ ಮಾತಿಗೆ ಎದುರೇಟು ಕೊಟ್ಟ ಅಮಿತ್‌ ಶಾ!

masthmagaa.com:

ʻಭಾರತಕ್ಕೆ ಬೇಕಾದ ಉಗ್ರರು ಕೆನಡಾದಲ್ಲಿ ಏನ್ ಮಾಡ್ತಿದ್ದಾರೆ?‌ ನಮ್ಮ ನ್ಯಾಯಾಂಗದ ಅಡಿಯಲ್ಲಿ ಆರೋಪ ಫೇಸ್‌ ಮಾಡ್ತಿರೋ ಉಗ್ರರಿಗೆ ಅಲ್ಲೇನು ಕೆಲಸ? ಅಂತ ಗೃಹ ಸಚಿವ ಅಮಿತ್‌ ಷಾ ಕೆನಡಾ ವಿರುದ್ಧ ಗುಡುಗಿದ್ದಾರೆʼ. ಖಲಿಸ್ತಾನಿ ಉಗ್ರ ಹರ್ದಿಪ್‌ ಸಿಂಗ್‌ ನಿಜ್ಜರ್‌ ಕೊಲೆ ಕೇಸ್‌ನಲ್ಲಿ ಭಾರತದ ಕೈವಾಡ ಇದೆ ಅನ್ನೋ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ‌ ಹೇಳಿಕೆಗೆ ಅಮಿತ್‌ ಷಾ ಮೌನ ಮುರಿದಿದ್ದಾರೆ. ಭಾರತದಲ್ಲಿ ಇದ್ಕೊಂಡು ಬೇರೆ ದೇಶದ ಮೇಲೆ ಪಿತೂರಿ ಮಾಡೋದನ್ನ ನಾವು ತಡೀತೀವಿ. ಅದೇ ರೀತಿ ಬೇರೆ ದೇಶಗಳಲ್ಲಿ ಇದ್ದು ಭಾರತದ ಮೇಲೆ ಸಂಚು ರೂಪಿಸೋದರ ಬಗ್ಗೆ ಆ ದೇಶ ಕ್ರಮ ತಗೊಳ್ಬೇಕು”. ಅಂತ ಟ್ರೂಡೋಗೆ ವಾರ್ನಿಂಗ್‌ ಕೊಟ್ಟಿದ್ದಾರೆ. ‌ಅಲ್ಲದೆ, ʻವಿದೇಶಗಳಲ್ಲಿ ಹತ್ಯೆ ಮಾಡೋದು ಭಾರತದ ಪಾಲಿಸಿಯಲ್ಲಿಲ್ಲ. ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಭಾರತವು ಸರಿಯಾದ ರಾಜತಾಂತ್ರಿಕ ನಿಲುವನ್ನ ಹೊಂದಿದೆʼ ಅಂತ ಅಮಿತ್‌ ಷಾ ಖಡಕ್‌ ಆಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply