masthmagaa.com:
ಹುಬ್ಬಳ್ಳಿಯ ನೇಹಾ ಕೇಸ್ ವಿಚಾರವಾಗಿ ನೇಹಾ ಪಾಲಕರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿ ಮಾಡಿದ್ದಾರೆ. ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಮೃತ ನೇಹಾಳ ತಂದೆ, ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಾಗೂ ತಾಯಿ ಗೀತಾ ಹಿರೇಮಠ್ ಅಮಿತ್ ಶಾ ಅವ್ರನ್ನ ಮೀಟ್ ಮಾಡಿ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಹುಬ್ಬಳ್ಳಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಪ್ರಚಾರ ಮಾಡಲು ಅಮಿತ್ ಶಾ ಹುಬ್ಬಳಿಗೆ ಬಂದ ವೇಳೆ ಭೇಟಿ ಮಾಡಿ ಮಾನವಿ ಮಾಡಿದ್ದಾರೆ. ಈ ವೇಳೆ ಅಮಿತ್ ಶಾ ಮೃತ ನೇಹಾಳ ಕುಟುಂಬಕ್ಕೆ ಸಾಂತ್ವಾನ ಹೇಳಿ.. ನಾವಿದ್ದೇವೆ ಹೆದರಬೇಡಿ ಅಂತ ಆತ್ಮಸ್ಥೈರ್ಯ ತುಂಬಿದ್ದಾರೆ ಅಂತ ಗೊತ್ತಾಗಿದೆ.
-masthmagaa.com
Contact Us for Advertisement