ದೇಶದಲ್ಲಿ ಮತ್ತೊಂದು ರೈಲು ದುರಂತ : ಆಂಧ್ರದಲ್ಲಿ ಲೊಕೊಪೈಲಟ್‌ ಸೇರಿ 13 ಸಾವು!

masthmagaa.com:

ದೇಶದಲ್ಲಿ ಇತ್ತೀಚೆಗೆ ಒಂದಿಲ್ಲೊಂದು ರೈಲು ದುರಂತಗಳು ಸಂಭವಿಸ್ತಾನೆ ಇವೆ. ವಾರದ ಹಿಂದಷ್ಟೇ ಬಿಹಾರದ ರೈಲು ಅಪಘಾತದಲ್ಲಿ ನಾಲ್ವರು ಸತ್ತಿದ್ರು. ನಿನ್ನೆ ಭಾನುವಾರ ಸಹ ಆಂಧ್ರಪ್ರದೇಶದಲ್ಲಿ ರೈಲು ಅಪಘಾತ ಸಂಭವಿಸಿ 13 ಜನರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಂಧ್ರದ ವೈಜಾ಼ಗ್‌-ಪಾಲಸ ಸ್ಪೆಷಲ್ ರೈಲು ರೆಡ್ ಸಿಗ್ನಲ್‌ ಇದ್ದಿದ್ರಿಂದ ಕೊತ್ಸವತ್ಸಲ ಬಳಿ ನಿಂತಿತ್ತು. ಸಿಗ್ನಲ್‌ ಗಮನಿಸದೆ ಬಂದ ವೈಜಾ಼ಗ್-ರಾಯ್‌ಗಢ್‌ ಪ್ಯಾಸೆಂಜರ್‌ ರೈಲು, ನಿಂತಿದ್ದ ರೈಲಿಗೆ ಹಿಂದಿನಿಂದ ಗುದ್ದಿದೆ. ಪರಿಣಾಮ, ನಿಂತಿದ್ದ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ. ಘಟನೆಗೆ ಕಾರಣವಾದ ಪ್ಯಾಸೆಂಜರ್‌ ಟ್ರೈನಿನ ಲೊಕೊಪೈಲಟ್‌ ಸಹ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅಂತ ರೈಲ್ವೆ ಅಧಿಕಾರಿಯೊಬ್ರು ಹೇಳಿದ್ದಾರೆ. ಸ್ಥಳಕ್ಕೆ ಆಂಧ್ರ ಸಿಎಂ ವೈ. ಎಸ್. ಜಗನ್‌ಮೋಹನ್‌ ರೆಡ್ಡಿ ಇಂದು ಭೇಟಿ ನೀಡಲಿದ್ದಾರೆ. ಈಗಾಗಲೆ ಅವರು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರೊ ಪ್ರಧಾನಿ ನರೇಂದ್ರ ಮೋದಿ ಸಹ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply