masthmagaa.com:

ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋದಲ್ಲಿರೋ ಯುವತಿ ಬೆಂಗಳೂರು ಪೊಲೀಸ್ ಕಮಿಷನರ್​ಗೆ ಇವತ್ತು ಮತ್ತೊಂದು ಪತ್ರ ಬರೆದಿದ್ದಾಳೆ. ಆರೋಪಿಯಾಗಿರೋ ರಮೇಶ್​ ಜಾರಕಿಹೊಳಿಯನ್ನ ವಿಚಾರಣೆ ನಡೆಸದೇ ಓಡಾಡೋಕೆ ಬಿಟ್ಟಿದ್ದಾರೆ. ಆದ್ರೆ ನನ್ನನ್ನ ಒಂದು ದಿನವೂ ಬಿಡದೆ ನಿರಂತರವಾಗಿ ವಿಚಾರಣೆ ಮಾಡಲಾಗ್ತಿದೆ. ನನ್ನ ಪಿಜಿಯಲ್ಲಿದ್ದ ಸಾಕ್ಷ್ಯಗಳನ್ನ ನಾಶ ಮಾಡಿದ್ದಾರೆ. ಆರೋಪಿಯನ್ನ ರಕ್ಷಿಸಲು ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗ್ತಿದೆ. ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರಗೆ ಬರ್ತಾರೆ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದು ನನಗೆ ಆತಂಕ ಮೂಡಿಸಿದೆ. ನನಗೆ ಎಸ್​ಐಟಿ ತನಿಖೆ ಮೇಲೆ ನಂಬಿಕೆ ಇಲ್ಲದಂತಾಗಿದೆ ಅಂತ ಯುವತಿ ಪತ್ರದಲ್ಲಿ ಹೇಳಿದ್ದಾಳೆ.

-masthmagaa.com

Contact Us for Advertisement

Leave a Reply