ನೇಮಕಾತಿ ಹಗರಣ: ಈಗ ಕಾಂಗ್ರೇಸ್‌ ಬ್ಲಾಕ್‌ ಸದಸ್ಯ ಅಂದರ್‌!

masthmagaa.com:

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಈಗ ದಿನಕ್ಕೊಂದು ಟ್ವಿಸ್ಟ್‌ ಸಿಗ್ತಾ ಇದೆ. ನೆನ್ನೆ ಕಾಂಗ್ರೇಸ್‌ ಶಾಸಕ ಎಂ.ವೈ.ಪಾಟೀಲ್‌ ಅವ್ರ ಗನ್‌ಮ್ಯಾನ್‌ನ್ನ ಬಂಧಿಸಿದ್ದ ಸಿಐಡಿ ಪೋಲಿಸ್ರು ಇವತ್ತು ಅಫಜಲಪುರದ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಮಹಾಂತೇಶ ಪಾಟೀಲ್‌ ಎಂಬುವರನ್ನ ಅರೆಸ್ಟ್‌ ಮಾಡಿದ್ದಾರೆ. ಗನ್‌ಮ್ಯಾನ್‌ ಹಯ್ಯಾಳಿ ದೇಸಾಯಿಗೆ ಸಹಾಯ ಮಾಡಿದ ಆರೋಪದ ಮೇಲೆ ಇವ್ರನ್ನ ಅರೆಸ್ಟ್‌ ಮಾಡಲಾಗಿದೆ ಅಂತ ಹೇಳಲಾಗ್ತಿದೆ. ಈಗ ಇದು ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಬೇಕು ಅಂತ ಹೇಳ್ತಿದ್ದ ಕಾಂಗ್ರೇಸ್‌ಗೆ ತೀವ್ರ ಮುಜುಗರ ತರಿಸಿದೆ. ಇನ್ನು ಆ ಕಡೆ ಪ್ರಕರಣದ ಬಗ್ಗೆ ಮಾತಾಡಿರೋ ಸಿಎಂ ಬೊಮ್ಮಾಯಿ, ಆರೋಪಿ ದಿವ್ಯಾ ಹಾಗರಗಿಯನ್ನ ಶೀಘ್ರವಾಗಿ ಬಂಧಿಸಲಾಗುವುದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply