masthmagaa.com:
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಸಂಬಂಧಿಸಿದ 25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಾ ಕುಮಾರಿ ಅನ್ನೋರ ಹೆಸರು ಮೊನ್ನೆಯಿಂದ ಕೇಳಿ ಬರ್ತಿತ್ತಲಾ. ಇವತ್ತು ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ, ಇದೆಲ್ಲದರ ಹಿಂದೆ ಉಮಾಪತಿಯ ಕೈವಾಡ ಇದೆ ಅಂತ ಹೇಳಿದ್ದಾರೆ. ಜೊತೆಗೆ ದರ್ಶನ್ ಮತ್ತು ಹರ್ಷ ಮೇಲಂಟ ಅವರ ಸಂಬಂಧದಲ್ಲಿ ಬಿರುಕು ಮೂಡಿಸೋ ಉದ್ದೇಶದಿಂದ ನನ್ನನ್ನ ದಾಳವಾಗಿ ಬಳಸಿಕೊಂಡ್ರು ಅಂತ ಹೇಳಿ, ಆತ್ಮಹತ್ಯೆ ಮಾಡಿಕೊಳ್ಳೋ ಬೆದರಿಕೆ ಹಾಕಿದ್ದಾರೆ. ಜೊತೆಗೆ ತಮ್ಮ ಹೆಸರು ಅರುಣ ಕುಮಾರಿನೇ.. ರಾಮನಗರ ಜಿಲ್ಲೆಯ ಹಾರೋಹಳ್ಳಿ ನಮ್ಮೂರು.. ನಾನು ಕುಮಾರ್ ಅನ್ನೋರನ್ನ ಮದುವೆಯಾಗಿದ್ದು ನಿಜ ಅಂತಾನೂ ಹೇಳಿಕೊಂಡಿದ್ದಾರೆ. ಮತ್ತೊಂದುಕಡೆ ಉದ್ಯಮಿ ನಾಗವರ್ಧನ್ ಅನ್ನೋರು ಕೂಡ ಅರುಣಾ ಕುಮಾರಿ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.
-masthmagaa.com
Contact Us for Advertisement