masthmagaa.com:
ಪಾಕ್ ಆಕ್ರಮಿತ ಕಾಶ್ಮೀರದ (POK) ವಿಚಾರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ವಾರ್ನಿಂಗ್ ನೀಡಿದ್ದಾರೆ. POK ಜನರ ಮೇಲೆ ಪಾಕಿಸ್ತಾನ ದೌರ್ಜನ್ಯ ಎಸಗುತ್ತಿದೆ. ಅದರ ಪರಿಣಾಮಗಳನ್ನ ಆ ದೇಶ ಅನುಭವಿಸಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ. ಕಾಶ್ಮೀರದಲ್ಲಿ ʻಶೌರ್ಯ ದಿವಸʼ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತಾಡಿದ ಸಿಂಗ್, ʻನಾವು ಜಮ್ಮು-ಕಾಶ್ಮೀರ ಹಾಗೂ ಲಡಾಖ್ನಲ್ಲಿ ನಮ್ಮ ಅಭಿವೃದ್ದಿ ಪ್ರಯಾಣ ಆರಂಭಿಸಿದ್ದೇವೆ. ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ಪ್ರದೇಶ ತಲುಪಿದಾಗ ನಮ್ಮ ಗುರಿಯನ್ನ ಸಾಧಿಸುತ್ತೇವೆʼ ಅಂತ ಸಿಂಗ್ ಹೇಳಿದ್ದಾರೆ. ಇಲ್ಲಿ ರಕ್ಷಣಾ ಸಚಿವರು POKಯನ್ನ ವಶಕ್ಕೆ ಪಡೆಯೊ ಕುರಿತು ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಆರ್ಟಿಕಲ್ 370ರ ಅಡಿಯಲ್ಲಿ ಹಿಂದಿನ ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಕೇಂದ್ರದ ನಿರ್ಧಾರವನ್ನ ಪ್ರಶಂಸಿದ್ದಾರೆ. ಅಂದ್ಹಾಗೆ 1947ರ ಅಕ್ಟೋಬರ್ 27ರಂದು ಭಾರತೀಯ ಸೇನೆ ಪಾಕ್ ಬೆಂಬಲಿತ ಜನರ ವಿರುದ್ದ ಹೋರಾಡಿ ವಿಜಯ ಸಾಧಿಸಿತ್ತು. ಇದರ ಹಿನ್ನಲೆಯಲ್ಲಿ ಶೌರ್ಯ ದಿವಸವನ್ನ ಆಯೋಜಿಸಲಾಗಿತ್ತು.
-masthmagaa.com
Contact Us for Advertisement