ನಾಳೆಯಿಂದ ಧಾರವಾಡದಲ್ಲಿ ಆರ್​​ಎಸ್​ಎಸ್​​ ಮೀಟಿಂಗ್

masthmagaa.com:

ನಾಳೆಯಿಂದ ಮೂರು ದಿನಗಳ ಕಾಲ ಧಾರವಾಡದಲ್ಲಿ ಆರ್​ಎಸ್​ಎಸ್​ ಮಹತ್ವದ ಸಭೆ ನಡೆಸಲಿದೆ. ಕೊರೋನಾದಿಂದಾಗಿ ಕಳೆದೆರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್​​ಎಸ್​ಎಸ್​ ನಾಯಕರು ನೇರಾನೇರ ಸಭೆ ನಡೆಸ್ತಿದ್ದಾರೆ. ಇದ್ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಕುರಿತು ನಿರ್ಣಯ ಮಂಡಿಸಲಾಗುತ್ತೆ. ಜೊತೆಗೆ ದೇಶದಲ್ಲಿ ತೈಲ ದರ ಏರಿಕೆ, ಮುಂದಿನ ವರ್ಷ ನಡೆಯಲಿರೋ ಪಂಚರಾಜ್ಯ ಚುನಾವಣೆ ಕೂಡ ಚರ್ಚೆಯ ಕೇಂದ್ರಬಿಂದುವಾಗಿರಲಿದೆ. ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಶ್ ಸೇರಿದಂತೆ ಸುಮಾರು 350 ಮಂದಿ ಆರ್​ಎಸ್​ಎಸ್​ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

-masthmgaa.com

Contact Us for Advertisement

Leave a Reply