masthmagaa.com:
ನಾಳೆಯಿಂದ ಮೂರು ದಿನಗಳ ಕಾಲ ಧಾರವಾಡದಲ್ಲಿ ಆರ್ಎಸ್ಎಸ್ ಮಹತ್ವದ ಸಭೆ ನಡೆಸಲಿದೆ. ಕೊರೋನಾದಿಂದಾಗಿ ಕಳೆದೆರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್ಎಸ್ಎಸ್ ನಾಯಕರು ನೇರಾನೇರ ಸಭೆ ನಡೆಸ್ತಿದ್ದಾರೆ. ಇದ್ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಕುರಿತು ನಿರ್ಣಯ ಮಂಡಿಸಲಾಗುತ್ತೆ. ಜೊತೆಗೆ ದೇಶದಲ್ಲಿ ತೈಲ ದರ ಏರಿಕೆ, ಮುಂದಿನ ವರ್ಷ ನಡೆಯಲಿರೋ ಪಂಚರಾಜ್ಯ ಚುನಾವಣೆ ಕೂಡ ಚರ್ಚೆಯ ಕೇಂದ್ರಬಿಂದುವಾಗಿರಲಿದೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಶ್ ಸೇರಿದಂತೆ ಸುಮಾರು 350 ಮಂದಿ ಆರ್ಎಸ್ಎಸ್ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
-masthmgaa.com
Contact Us for Advertisement